ಸುಮಲತಾ ವಿರುದ್ಧ ಹೇಳಿಕೆ ನೀಡಿರುವ ಸಚಿವ ರೇವಣ್ಣ ಬೇಷರತ್ ಕ್ಷಮೆ ಕೇಳಬೇಕು: ಶೋಭಾ ಕರಂದ್ಲಾಜೆ

ಮಹಿಳಾ ದಿನಾಚರಣಯ ದಿನವೇ ಮಾಜಿ ಸಚಿವ ಚಿತ್ರನಟ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ...
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ
ಉಡುಪಿ: ಮಹಿಳಾ ದಿನಾಚರಣಯ ದಿನವೇ ಮಾಜಿ ಸಚಿವ ಚಿತ್ರನಟ ದಿವಂಗತ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರ ಅಕ್ಷಮ್ಯ ಅಪರಾಧ, ಅವರು ಕೂಡಲೇ ಈ ಕುರಿತು ಸುಮಲತಾ ಅವರ ಬಳಿ ಕ್ಷಮೆಯಾಚಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ,
ನಿನ್ನೆ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಡ ಸತ್ತ ಬಳಿಕ ಅವರ ಪತ್ನಿ ರಾಜಕೀಯಕ್ಕೆ ಬರಬಾರದು ಎಂದು ಈ ದೇಶದಲ್ಲಿ ಕಾನೂನು ಇಲ್ಲ. ಅಥವಾ ಗಂಡ ಸತ್ತು ಇಷ್ಟು ಸಮಯದವರೆಗೆ ರಾಜಕೀಯಕ್ಕೆ ಬರಬಾರದು, ಇಷ್ಟು ಸಮಯ ಕಳೆದ ನಂತರವಷ್ಟೇ ರಾಜಕೀಯಕ್ಕೆ ಕಾಲಿಡಬೇಕು ಎಂಬ ನಿಯಮಗಳಿಲ್ಲ. ಈ ರೀತಿ ಮಹಿಳೆಯರ ಬಗ್ಗೆ ಸಚಿವ ರೇವಣ್ಣ ಕೀಳುಮಟ್ಟದ ಹೇಳಿಕೆ ನೀಡಬಾರದು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ಆದರೆ ಅವರು ಆಡಿರುವ ಮಾತು ಸರಿಯಲ್ಲ, ಹೀಗಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಟೀಕೆ ಮಾಡುವುದು ಸರಿಯಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com