ನಿನ್ನೆ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಡ ಸತ್ತ ಬಳಿಕ ಅವರ ಪತ್ನಿ ರಾಜಕೀಯಕ್ಕೆ ಬರಬಾರದು ಎಂದು ಈ ದೇಶದಲ್ಲಿ ಕಾನೂನು ಇಲ್ಲ. ಅಥವಾ ಗಂಡ ಸತ್ತು ಇಷ್ಟು ಸಮಯದವರೆಗೆ ರಾಜಕೀಯಕ್ಕೆ ಬರಬಾರದು, ಇಷ್ಟು ಸಮಯ ಕಳೆದ ನಂತರವಷ್ಟೇ ರಾಜಕೀಯಕ್ಕೆ ಕಾಲಿಡಬೇಕು ಎಂಬ ನಿಯಮಗಳಿಲ್ಲ. ಈ ರೀತಿ ಮಹಿಳೆಯರ ಬಗ್ಗೆ ಸಚಿವ ರೇವಣ್ಣ ಕೀಳುಮಟ್ಟದ ಹೇಳಿಕೆ ನೀಡಬಾರದು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ಆದರೆ ಅವರು ಆಡಿರುವ ಮಾತು ಸರಿಯಲ್ಲ, ಹೀಗಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.