ಸುಮಲತಾ ಅವರಿಗೆ ಕಾಂಗ್ರೆಸ್ ನ ಕೆಲ ನಾಯಕರು ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, ಮಂಡ್ಯದಲ್ಲಿ ಕೆಲ ಕಾಂಗ್ರೆಸಿಗರು ಬಹಳ ಮುಂದೆ ಹೋಗಿದ್ದಾರೆ. ಸ್ವಾಭಿಮಾನ ಕಳೆದುಕೊಂಡು ಅವರ ಮುಂದೆ ಹೋಗಿ ಪುತ್ರನನ್ನು ಬೆಂಬಲಿಸಿ ಎಂದು ತಾವು ಭಿಕ್ಷೆ ಬೇಡುವುದಿಲ್ಲ. ಮೂಲ ಕಾಂಗ್ರೆಸಿಗರು ಆಶೀರ್ವಾದ ಮಾಡಿ, ನಿಖಿಲ್ ಬೆಂಬಲಕ್ಕೆ ನಿಂತಿದ್ದಾರೆ. ತಮಗೆ ಸಮರ್ಥರಾಗಿರುವ ಜೆಡಿಎಸ್ ಕಾರ್ಯಕರ್ತರಷ್ಟೇ ಅಗತ್ಯವಾಗಿದ್ದು. ಬೆನ್ನಿಗೆ ಚೂರಿ ಹಾಕುವವರು ಅಗತ್ಯವಿಲ್ಲ ಎಂದರು.