ಇಂದು ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆದ ಮಂಡ್ಯ ಜಿಲ್ಲಾ ಮುಖಂಡರ ಜೊತೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಟ್ರಬಲ್ ಶೂಟರ್ ಅಲ್ಲ, ಇಲ್ಲಿ ಟ್ರಬಲ್ಲೂ ಇಲ್ಲ ಶೂಟು ಇಲ್ಲ, ನಾವು ಮನಸ್ಸು ಕೊಟ್ಟು ಕೆಲಸ ಮಾಡುವವರು. ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ಸಾಕಷ್ಟು ಜನ ಸೇರಿದ್ದರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಅವರು ಒತ್ತಡಕ್ಕೆ ಒಳಗಾಗಿಲ್ಲ.ಕಷ್ಟದ ಪರಿಸ್ಥಿತಿ ಎದುರಿಸಿ ರಾಜಕೀಯ ಮಾಡಿದ್ದಾರೆ. ತಮ್ಮ ಹೆಂಡತಿಯನ್ನೂ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಅವರಿಗೆ ರಾಜಕೀಯದ ಒಳಸುಳಿಗಳು ತಿಳಿದಿವೆ ಎಂದರು.