ಇದೊಂದು ಬಹಿರಂಗ ವಿಚಾರಣೆಯಾಗಿದ್ದು ಯಾರು ಬೇಕಾದರೂ ವಿಚಾರಣೆಯಲ್ಲಿ ಭಾಗವಹಿಸಬಹುದು. ಮತದಾರರ ದೂರಿನ ಪ್ರತಿ ಮತ್ತು ಇತರ ದಾಖಲೆಗಳು ತಮ್ಮ ಕಚೇರಿಯಿಂದ ಪಡೆಯಬಹುದಾಗಿದೆ ಎಂದರು. ತಾವು ಯಾವ ನಿರ್ಧಾರವನ್ನು ಕೂಡ ಆತುರದಿಂದ ತೆಗೆದುಕೊಳ್ಳುವುದಿಲ್ಲ, ಯಾವುದೇ ಪ್ರಭಾವ ಮತ್ತು ಒತ್ತಡಗಳಿಗೆ ಬಲಿಯಾಗುವುದಿಲ್ಲ, ಇಂತಹ ಪ್ರಕರಣಗಳು ದೇಶದಲ್ಲಿ ಬೇರೆಲ್ಲೂ ನಡೆಯದಿರುವುದರಿಂದ ಕಾನೂನು ತಜ್ಞರ ಅಭಿಪ್ರಾಯ ಪಡೆಯುವುದಾಗಿ ಹೇಳಿದರು.