.2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಲ್ಲಿ ಕ್ಷೇತ್ರ ಕಳೆದುಕೊಂಡಿದ್ದ ಬಿಜೆಪಿ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ.ಜನರ ಒಲವು ನಮ್ಮ ಪರವಾಗಿದೆ.2018ರ ಚುನಾವಣೆಯಲ್ಲಿ ಕೆಲವು ಲೋಪಗಳಿಂದಾಗಿ ಕ್ಷೇತ್ರ ಕಳೆದುಕೊಂಡಿದ್ದೇವು. ಆದರೆ, ಈ ಬಾರಿ ಅನುಮಾನವಿಲ್ಲ,ಲಿಂಗಾಯತ ಮತಗಳು ಬಿಜೆಪಿ ಗೆಲುವಿಗೆ ನೆರವಾಗಲಿವೆ ಎಂಬ ವಿಶ್ವಾಸ ಇರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.