ಚಿಂಚೋಳಿಯ ಚಂದಾಪುರದ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಉಮೇಶ್ ಜಾಧವ್ ಮಾರಾಟವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ನನ್ನ ಮಗಳಿಗೆ ಕಾಲೇಜಿನಲ್ಲಿ ಅಪಮಾನವಾಗಿದೆ. ನಮ್ಮ ಕುಟುಂಬ ಕೂಡ ನೊಂದಿದೆ. ಆಕೆಯ ಸ್ನೇಹಿತರು 'ನಿನ್ನ ತಂದೆ ಮಾರಾಟವಾಗಿದ್ದಾರೆ' ಎಂದು ಅವಮಾನಿಸುತ್ತಿದ್ದರು. ಇದು ಆಕೆಯ ಮೇಲೆ ದುಷ್ಪರಿಣಾಮ ಬೀರಿದೆ. ಪಿಯುಪಿಯಲ್ಲಿ ಫೇಲ್ ಆಗಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿದರು.