ಧೈರ್ಯ ಇದ್ದರೆ ಬೆಂಬಲ ವಾಪಾಸ್ ಪಡೆಯಿರಿ: ಸಿದ್ದರಾಮಯ್ಯಗೆ ಆರ್ ಅಶೋಕ್ ಸವಾಲು

ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಿರುವ ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಮೊದಲು ಬೆಂಬಲ ವಾಪಾಸ್ ಪಡೆಯಲಿ ಮಾಜಿ ಡಿಸಿಎಂ ಆರ್...
ಅಶೋಕ್ ಮತ್ತು ಸಿದ್ದರಾಮಯ್ಯ
ಅಶೋಕ್ ಮತ್ತು ಸಿದ್ದರಾಮಯ್ಯ
ಕಲಬುರಗಿ: ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಿರುವ ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಮೊದಲು ಬೆಂಬಲ ವಾಪಾಸ್ ಪಡೆಯಲಿ  ಮಾಜಿ ಡಿಸಿಎಂ ಆರ್. ಅಶೋಕ್ ಸವಾಲು ಹಾಕಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು,  ನಾವು ಮಧ್ಯಂತರ ಚುನಾವಣೆಗೆ ಸಿದ್ದರಾಗಿದ್ದೀವಿ, ಬಿಜೆಪಿ ಅವರು ರೆಡಿಯಿದ್ದಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ, ಈ ಪ್ರಶ್ನೆ ಕೇಳುವ ಮೊದಲು ಧೈರ್ಯವಿದ್ದರೇ ಅವರು ಸಮ್ಮಿಶ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯಲಿ ಎಂದು ಚಾಲೆಂಜ್ ಮಾಡಿದ್ದಾರೆ. 
ಸಮ್ಮಿಶ್ರ ಸರ್ಕಾರದಲ್ಲಿ ಈಗ ಕೇಳಿ ಬರುತ್ತಿರುವ ‘ಸಿದ್ದರಾಮಯ್ಯ ಸಿಎಂ’ ಎಂಬ ನಾಟಕದ ಸೂತ್ರಧಾರ ಖುದ್ದು ಸಿದ್ದರಾಮಯ್ಯ ಅವರೇ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಹಣ ಬರುವಂತಹ ಸ್ಕೀಮ್ ಗಳನ್ನು ಮಾತ್ರ ಮಾಡಲಾಗುತ್ತಿದೆ. ದುಡ್ಡಿಗೋಸ್ಕರ ಸರ್ಕಾರ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com