ಲೋಕಸಭಾ ಚುನಾವಣೆ ಬಳಿಕ ಉಮೇಶ್ ಜಾಧವ್ ಬೀದಿ ಪಾಲಾಗುತ್ತಾನೆ. ಅಪ್ಪ ಲೋಕಸಭಾ ಚುನಾವಣೆಯಲ್ಲಿ, ಮಗ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಾನೆ ಎಂದು ಕೂಡ ಭವಿಷ್ಯ ಹೇಳಿದ್ದಾರೆ. ಚುನಾವಣೆಯಲ್ಲಿ ಅಪ್ಪ-ಮಗ ಇಬ್ಬರೂ ಸೋತು, ಬೀದಿಗೆ ಬರುತ್ತಾರೆ. ವ್ಯಕ್ತಿಗೆ ಉಪಕಾರ ಮಾಡಿದರೆ ಅದನ್ನು ನೆನಪಿಸಿಕೊಳ್ಳುವ ಮಾನವೀಯತೆ ಇರಬೇಕು. ಆದರೆ ಉಮೇಶ್ ಜಾಧವ್ನಲ್ಲಿ ಅದು ಯಾವುದು ಇಲ್ಲ ಎಂದರು. ನಾನು ಮುಖ್ಯಮಂತ್ರಿಯಾಗಿದ್ದಾಗ, ಜಾಧವ್ ಈ ಕ್ಷೇತ್ರಕ್ಕೆ ಕೇಳೀದಷ್ಟು ಅನುದಾನ ನೀಡಿದ್ದೆ. ಆತ ಸಂಭಾವಿತ ವ್ಯಕ್ತಿ ಎಂದುಕೊಂಡಿದ್ದೆ. ಆದರೆ ಈಗ ಗೊತ್ತಾಯಿತು. ಆತ ಗೋಮುಖ ವ್ಯಾಘ್ರ ಎಂದು ಕಿಡಿಕಾರಿದರು.