ಚುನಾವಣೆ ಪ್ರಚಾರದ ನೆಪದಲ್ಲಿ ಮುಖ್ಯಮಂತ್ರಿ ಈಗ ಇತ್ತ ಕಡೆಗೆ ಆಗಮಿಸುತ್ತಿದ್ದಾರೆ. ವಿಧಾನ ಸಭೆ ಚುನಾವಣೆ ವೇಳೆ ಹುಬ್ಬಳ್ಳಿಯಲ್ಲಿ ಮನೆ ಮಾಡಿ ಚುನಾವಣೆ ಬಳಿಕ ಮನೆಯನ್ನೂ ಖಾಲಿ ಮಾಡಿಕೊಂಡು ಹೋದರು. ಹಾಸನ, ಮಂಡ್ಯ, ರಾಮನಗರ ,ಮೈಸೂರು ಸೇರಿದಂತೆ ಐದು ಜಿಲ್ಲೆಗೆ ಕೊಟ್ಟ ಅನುದಾನವನ್ನು ಉತ್ತರ ಕರ್ನಾಟಕ ಭಾಗಕ್ಕೂ ನೀಡಲಿ ಎಂದು ಶ್ರೀರಾಮುಲು ಒತ್ತಾಯಿಸಿದರು.