ಮಂಡ್ಯ: ಎಷ್ಟೇ ಹೋಮ-ಪೂಜೆ ಮಾಡಿದರೂ ಮಂಡ್ಯ ಚುನಾವಣಾ ಫಲಿತಾಂಶ ಬದಲಾಗುವುದಿಲ್ಲ ಎಂದು ಅಭಿಷೇಕ್ ಗೌಡ ಸಿಎಂ ಎಚ್.ಡಿ ಕುಮಾರಸ್ವಾಮಿ ಕುಟುಂಬಕ್ಕೆ ಟಾಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅಭಿಷೇಕ್ ಗೌಡ, ಪೂಜೆ ಹೋಮ ಹವನ ಹಾಗೂ ಎಷ್ಟೇ ,ಸರ್ವೇ ಮಾಡಿಸಿದರೂ ಮಂಡ್ಯ ರಿಸಲ್ಟ್ ಚೇಂಜ್ ಆಗುವುದಿಲ್ಲ, ನಮಗೆ ಯಾವುದೇ ಸರ್ವೆಯ ಅವಶ್ಯಕತೆಯಿಲ್ಲ, ಇಲ್ಲಿನ ಜನರ ಜೊತೆಗಿನ ಒಡನಾಟದಿಂದಲೇ ನಮಗೆ ಫಲಿತಾಂಶ ಏನೆಂಬುದು ತಿಳಿಸಿದಿದೆ ಎಂದು ಹೇಳಿದ್ದಾರೆ.
ಮಂಡ್ಯದ ಜನ ಈಗಾಗಲೇ ತೀರ್ಮಾನ ಮಾಡಿಯಾಗಿದೆ. ಫಲಿತಾಂಶ ಏನೆಂಬುದು ಈಗಾಗಲೇ ಗೊತ್ತಾಗಿದೆ,.ಈ ತಿಂಗಳು ಅಪ್ಪನ ಹುಟ್ಟು ಹಬ್ಬವಿದೆ, ಅಮ್ಮನ ಫಲಿತಾಂಶ ಕೂಡ ಇದೇ ತಿಂಗಳು ಬರಲಿದೆ, ಹೀಗಾಗಿ ಮೇ ತಿಂಗಳು ನಮಗೆ ವಿಶೇಷವಾಗಿದೆ ಎಂದು ಅಭಿಷೇಕ್ ತಿಳಿಸಿದ್ದಾರೆ.