ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಖರ್ಗೆ ಅವರು, 'ದಲಿತ ಎಂಬ ಕಾರಣಕ್ಕೆ ಅಯ್ಯೋ ಪಾಪ ಎಂದು ಹೇಳಿ ಯಾರದ್ದೋ ಕನಿಕರಕ್ಕಾಗಿ ಸಿಎಂ ಹುದ್ದೆ ನೀಡುವುದಾದರೆ ನನಗೆ ಬೇಡವೇ ಬೇಡ, ನನ್ನ ಯೋಗ್ಯತೆ, ಅರ್ಹತೆ ಮತ್ತು ಪಕ್ಷಕ್ಕಾಗಿ ನಾನು ಮಾಡಿದ ಕೆಲಸ ಕಾರ್ಯಗಳನ್ನು ಗುರುತಿಸಿ ಹುದ್ದೆ ನೀಡುವುದಾದರೆ ಮಾತ್ರ ನಾನು ಅದನ್ನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆಯೇ ಹೊರತು ದಲಿತ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಪಟ್ಟ ಕೊಡುವುದು ಬೇಡ” ಎಂದು ತಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದರು.