ಕೋಲಾರ: ಕಾಂಗ್ರೆಸ್ ಪಕ್ಷದವರ ಎಲ್ಲಾ ರೀತಿಯ ಕಿರುಕುಳವನ್ನು ಸಹಿಸಿಕೊಳ್ಳುವ ಶಕ್ತಿ ಸಿಎಂ ಕುಮಾರಸ್ವಾಮಿ ಅವರಿಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ವಿಶ್ವನಾಥ್, ಮೇ 23 ರ ನಂತರ ಯಾವುದೇ ಬದಲಾವಣೆ ಆಗುವುದಿಲ್ಲ, ಸಮ್ಮಿಶ್ರ ಪಕ್ಷ ಚಿರಾಯು ಆಗಿರಲಿದೆ ಎಂದು ಹೇಳಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಲ್ಲಾ ರೀತಿಯಲ್ಲೂ ವಿಫಲರಾಗಿದ್ದಾರೆ, ಕಾರ್ಯಸೂಚಿ ದಾಖಲಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ವಿಶ್ವನಾಥ್ ರೋಷನ್ ಬೇಗ್ ಯಾವ ಪಕ್ಷ ಸೇರಲು ಸ್ವತಂತ್ರ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.