ಹೀಗಾಗಿ ತುಮಕೂರಿನಲ್ಲಿ ತಂದೆಯ ಸೋಲು ಹೆಚ್.ಡಿ.ರೇವಣ್ಣ ಅವರಿಗೆ ನೋವುಂಟು ಮಾಡಿದ್ದು, ಪತ್ನಿ ಭವಾನಿ ಅವರೊಂದಿಗೆ ದೇವೇಗೌಡರನ್ನು ಭೇಟಿ ಮಾಡಿದರು. ಅನಿರೀಕ್ಷಿತ ಫಲಿತಾಂಶ ನೋವುಂಟು ಮಾಡಿದೆ. ನಿಮ್ಮ ಸೋಲನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪುತ್ರ ಪ್ರಜ್ವಲ್ ಗಾಗಿ ಮೂಲ ಕ್ಷೇತ್ರವನ್ನೇ ತಾವು ತ್ಯಾಗ ಮಾಡಬೇಕಾಯಿತು. ಹಾಸನದಿಂದಲೇ ತಾವು ಸ್ಪರ್ಧಿಸಿದ್ದರೆ ನಿರೀಕ್ಷೆಯ ಫಲಿತಾಂಶ ಬರುತ್ತಿತ್ತು ಎಂದು ಭವಾನಿ ರೇವಣ್ಣ, ದೇವೇಗೌಡರ ಬಳಿ ದುಃಖಿಸಿ, ಕ್ಷಮೆ ಯಾಚಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪುತ್ರನ ರಾಜೀನಾಮೆ ವಿಚಾರ ಪ್ರಸ್ತಾಪಿಸಿದಾಗ, ''ಆ ಯೋಚನೆ ಈಗ ಬೇಡ. ಮುಂದೆ ನೋಡೋಣ'' ಎಂದು ದೇವೇಗೌಡರು ತಮ್ಮ ಮಗ, ಸೊಸೆಗೆ ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ.