ರಾಷ್ಟ್ರಮಟ್ಟದಲ್ಲಿ ಬಿಎಸ್ಪಿ ಮತಗಳಿಕೆಯಲ್ಲಿ ಇಳಿಕೆ; ಕರ್ನಾಟಕದಲ್ಲಿ ಏರಿಕೆ

ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇಕಡಾ 6ರಷ್ಟು ಫಲಿತಾಂಶ ಪಡೆಯುವ ...
ನೂತನ ಸಂಸದ ಡ್ಯಾನಿಶ್ ಆಲಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡಿದರು
ನೂತನ ಸಂಸದ ಡ್ಯಾನಿಶ್ ಆಲಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡಿದರು
ಮೈಸೂರು: ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇಕಡಾ 6ರಷ್ಟು ಫಲಿತಾಂಶ ಪಡೆಯುವ ಗುರಿಯನ್ನು ಬಹುಜನ ಸಮಾಜ ಪಕ್ಷ ಇಟ್ಟುಕೊಂಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಆದರೂ ಕರ್ನಾಟಕದಲ್ಲಿ ಈ ಬಾರಿ ಬಿಎಸ್ ಪಿ ಸಾಧನೆ ಉತ್ತಮವಾಗಿದೆ ಎಂದೇ ಹೇಳಬಹುದು. ಶೇಕಡಾ 0.86ರಿಂದ ಶೇಕಡಾ 1.16ರಷ್ಟು ಫಲಿತಾಂಶದಲ್ಲಿ ಏರಿಕೆಯಾಗಿದೆ. ಆದರೆ ರಾಷ್ಟ್ರಮಟ್ಟದಲ್ಲಿ 2014ರಲ್ಲಿ ಬಂದ ಶೇಕಡಾ 4.14 ಫಲಿತಾಂಶದಿಂದ ಈ ಬಾರಿ ಶೇಕಡಾ 3.63 ಫಲಿತಾಂಶಕ್ಕೆ ಇಳಿದಿದೆ.
ಕಳೆದ ವರ್ಷ ಕರ್ನಾಟಕದಲ್ಲಿ ಒಬ್ಬರೇ ಒಬ್ಬ ಶಾಸಕರನ್ನಿಟ್ಟುಕೊಂಡು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸೇರಿಕೊಂಡಿತ್ತು. ಕೊಳ್ಳೆಗಾಲದಿಂದ ಆಯ್ಕೆಯಾಗಿದ್ದ ಎನ್ ಮಹೇಶ್ ಸಂಪುಟದಲ್ಲಿ ಕೂಡ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ ಕೆಲವೇ ಸಮಯಗಳಲ್ಲಿ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com