"ಸಿದ್ದರಾಮಯ್ಯ ಮಾತ್ರ ಕ್ಯಾಬಿನೆಟ್ ವಿಸ್ತರಣೆಯನ್ನು ಬಯಸುತ್ತಾರೆ, ಇದರಿಂದಾಗಿ ಈಗ ಸಚಿವರಾಗಿರುವ ಯಾರಿಒಬ್ಬರನ್ನೂ ಕೈಬಿಟ್ಟರೆ ಸರ್ಕಾರಕ್ಕೆ ತೊಂದರೆಯಾಗುವುದಿಲ್ಲ ಎನ್ನಲಾಗಿದೆ. ಆದರೆ ಪರಮೇಶ್ವರ, ಡಿಕೆ ಶಿವಕುಮಾರ್ ಮೊದಲಾದವರು ಯಾವುದೇ ನಿಷ್ಟಾವಂತ ನಾಯಕರನ್ನು ಸಂಪುಟದಿಂಡ ಹೊರಗಿಡುವುದರಿಂದ ಮತ್ತೆ ಸರ್ಕಾರಕ್ಕೆ ಅಡ್ಡಿಯುಂಟಾಗುವ ಲಕ್ಷಣಗಳಿದೆ ಎಂದು ಅಭಿಪ್ರಾಯ ತಾಳುತ್ತಿದ್ದಾರೆ. " ಓರ್ವ ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಆಂತರಿಕ ಮೂಲಗಳು ಹೇಳುವಂತೆ ರಾಹುಲ್ ಗಾಂಧಿ ತಮ್ಮ ಪ್ಕ್ಷದ ಸಾಮಾನ್ಯ ಕಾರ್ಯದರ್ಶಿಗಳೊಡನೆ ಸಂವಹನ ನಡೆಸಲು ನಿರಾಕರಿಸಿದ್ದಾರೆ. ಇದರಿಂದಾಗಿ ವೇಣುಗೋಪಾಲ್ ಅವರಿಗೆ ತಾವೇ ನಿರ್ಧಾರ ತೆಗೆದುಕೊಳ್ಳುವುದು ಕಠಿಣವಾಗಿ ಪರಿಣಮಿಸಿದೆ."ನಾವು ಇದುವರೀಗೆ ಯಾವ ನಿರ್ಧಾರಕ್ಕೆ ಬಂದಿಲ್ಲ, ಆ ಸಂಬಂಧ ಚರ್ಚಿಸಲಿಲ್ಲ" ಕಾಂಗ್ರೆಸ್ ನಾಯಕರು ಹೇಳಿದ್ದಾರೆ.