ಹುಣಸೂರು: ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮುರಿದು ಬಿದ್ದ ನಂತರ ಎರಡೂ ಪಕ್ಷದವರು ಹಾವು-ಮುಂಗುಸಿ ರೀತಿ ವರ್ತಿಸುತ್ತಿವೆ. ಜೆಡಿಎಸ್ನವರು ಕೋತಿಗಳು, ಇಂಥವರನ್ನು ಕಟ್ಟಿಕೊಂಡು ನಾವೆಲ್ಲಿ ಸಾಯೋಣ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.
ಹುಣಸೂರಿನಲ್ಲಿ ಪ್ರಚಾರ ನಡೆಸುವ ವೇಳೆ ಜೆಡಿಎಸ್ ಪಕ್ಷವನ್ನು ಕೋತಿಗಳಿಗೆ ಹೋಲಿಕೆ ಮಾಡಿದ ಮಾಜಿ ಪರಮೇಶ್ವರ್, ತೀವ್ರ ಗ್ದಾಳಿ ನಡೆಸಿದರು. “ಕೋತಿಗಳು ಮರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಜಿಗಿಯುತ್ತವೆ. ಇದೆಲ್ಲ ನಮ್ಮೂರಿನ ಕಡೆ ಮಾಮೂಲಿ. ಅದೇ ರೀತಿ ಜೆಡಿಎಸ್ನವರ ಕಥೆ. ಬೆಳಿಗ್ಗೆ ಒಂದು ಹೇಳಿಕೆ, ಸಂಜೆ ಒಂದು ರೀತಿ ಹೇಳಿಕೆ ಕೊಡ್ತಾರೆ. ಇಂಥವರನ್ನು ಕಟ್ಟಿಕೊಂಡು ನಾವೆಲ್ಲಿ ಸಾಯೋಣ,” ಎಂದು ಪ್ರಶ್ನಿಸಿದರು.
ನಮ್ಮ ಜೊತೆ ಇರಿ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರೂ ಇರುವುದಿಲ್ಲ. ಅವರ ಜೊತೆಗಾದರೂ ಹೋಗಿ ಅವರಾದರೂ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೆ ಅದೂ ಆಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
Advertisement