ಕಾಂಗ್ರೆಸ್ ನಾಯಕರ ಹಗಲುಗನಸು ಎಂದಿಗೂ ನಿಜವಾಗದು: ಎಸ್ ಎಂ ಕೃಷ್ಣ 

ಅಪವಿತ್ರ ಮೈತ್ರಿ ಮಾಡಿಕೊಂಡು 14 ತಿಂಗಳು ಸರ್ಕಾರ ನಡೆಸಿದ್ದೇ ಸಮ್ಮಿಶ್ರ ಸರ್ಕಾರದ ಮಹತ್ ಸಾಧನೆ ಎಂದು ಮಾಜಿ ಸಿಎಂ ಎಸ್ .ಎಂಕೃಷ್ಣ ಹೇಳಿದ್ದಾರೆ.
ಎಸ್ ಎಂಕೃಷ್ಣ
ಎಸ್ ಎಂಕೃಷ್ಣ

ಬೆಂಗಳೂರು: ಅಪವಿತ್ರ ಮೈತ್ರಿ ಮಾಡಿಕೊಂಡು 14 ತಿಂಗಳು ಸರ್ಕಾರ ನಡೆಸಿದ್ದೇ ಸಮ್ಮಿಶ್ರ ಸರ್ಕಾರದ ಮಹತ್ ಸಾಧನೆ ಎಂದು ಮಾಜಿ ಸಿಎಂ ಎಸ್ .ಎಂಕೃಷ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ನಂತರ ಜೆಡಿಎಸ್ ತನ್ನ ಉಳಿವಿಗೆ ಪ್ರಯತ್ನ ಪಡಬೇಕು ಎಂದರು. ಉಪ ಚುನಾವಣೆ ನಂತ್ರ ರಾಜ್ಯದಲ್ಲಿ ಮತ್ತೆಅಧಿಕಾರಕ್ಕೆ ಬರಲು ಕೆಲವು ಕಾಂಗ್ರೆಸ್ ನಾಯಕರು ಹಗಲು ಗನಸು ಕಾಣುತ್ತಿದ್ದಾರೆ ಆದರೆ ಅಂದು ಎಂದಿಗೂ ನಿಜವಾಗದು ಎಂದು ಹೇಳಿದ್ದಾರೆ.

ಇನ್ನು ಉಪ ಚುನಾವಣೆ ನಂತರ ಮತ್ತಷ್ಟು ಕಾಂಗ್ರೆಸ್ ಮತ್ತು ಜೆಡಿಎಸ್  ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ. ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುವವರುಜನರಿಂದ ಸಂಪೂರ್ಣವಾಗಿ ತಿರಸ್ಕೃತವಾಗಿದ್ದಾರೆ, ಹೀಗಾಗಿ ಜನತೆ ರಾಜಕೀಯ ಸ್ಥಿರತೆಗಾಗಿ ಬಿಜೆಪಿಗೆ ಮತ ಚಲಾಯಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com