ಮೈಸೂರು: ಜೆಡಿಎಸ್ ಪಕ್ಷದ ಶಾಸಕರು,ವಿಧಾನ ಪರಿಷತ್ ಸದಸ್ಯರಿಗೆ ನನ್ನ ಮೇಲೆ ನಂಬಿಕೆ ಇಲ್ಲದಿದ್ದರೇ ಬೇರೆ ನಾಯಕರನ್ನು ಆಯ್ಕೆ ಮಾಡಿ ಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಅಧಿಕಾರ ಬಿಟ್ಟು ಹೋಗುವು ದಕ್ಕೆ ಸಿದ್ಧನಿದ್ದೇನೆ.ನಾನು ಸ್ಥಾನವನ್ನು ಬಿಟ್ಟು ಕೊಡಲು ಸಿದ್ಧನಿದ್ದೇನೆ. ಅವರನ್ನು ಪ್ರೀತಿಯಿಂ ದ ಗೌರವದಿಂದ ವಿಶ್ವಾಸ ನಡೆಸಿಕೊಳ್ಳವವರನ್ನು ಆರಿಸಿ ಕೊಳ್ಳಲಿ ಎಂದು ತಮ್ಮ ಪಕ್ಷದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಆದ ಮೇಲೆ ನಾನು ಇದೇ ಸ್ಥಾನದಲ್ಲಿ ಗೂಟ ಹೊಡೆದುಕೊಂಡು ಕೂರು ವುದಿಲ್ಲ ನನಗೆ ಅಧಿಕಾರ ಬೇಕಾಗಿಲ್ಲ.ಪಕ್ಷದ ರಾಷ್ಟ್ರೀಯ ವರಿಷ್ಠ ದೇವೇಗೌಡರಿಗೂ ಅದನ್ನೇ ಹೇಳು ತ್ತೇನೆ.13 ವರ್ಷದಿಂದ ಇದೆಲ್ಲವನ್ನೂ ನೋಡಿಕೊಂಡು ಬಂದಿದ್ದೇ ನೆ.ನನ್ನ ಆತ್ಮಕ್ಕೆ ನಾನು ಉತ್ತರ ಕೊಟ್ಟುಕೊಂಡರೆ ಸಾಕು.ಇನ್ನೊಬ್ಬರನ್ನು ಮೆಚ್ಚಿಸ ಬೇಕಾಗಿಲ್ಲ ಎಂದು ಹೇಳಿದರು.
Advertisement