ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ವೀರ್ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಹೀಗಾಗಿ ಅವರನ್ನು ನಾನು ತರಾಟೆಗೆ ತೆಗೆದುಕೊಂಡೆ, ಹಿಂದೂಗಳ ಬಗ್ಗೆ ಅಗೌರವ ತೋರಿದರೇ,ನನ್ನ ರಕ್ತ ಕುದಿಯುತ್ತದೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಸೊಗಡು ಶಿವಣ್ಣ, ಕಾಂಗ್ರೆಸ್ ನಲ್ಲಿ ಯಾರೂ ಮನಿ ಉಗ್ರಗಾಮಿಗಳು ಇಲ್ವಾ, ಯಾರು ಭ್ರಷ್ಟಾಚಾರಿಗಳು ಇಲ್ವಾ? ಸಿದ್ದರಾಮಯ್ಯ ಲೋಕಾಯುಕ್ತ ತೆಗೆದು ಎಸಿಬಿ ಸ್ಥಾಪಿಸಿ ಬಚಾವ್ ಆಗುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಲ್ಲರನ್ನೂ ಏಕವಚನದಲ್ಲಿ ಮಾತನಾಡಿಸುವುದರಲ್ಲಿ ಸಿದ್ದರಾಮಯ್ಯ ಮಹಾನ್ ನಾಯಕ, ಸ್ಪೀಕರ್ ಅವರಿಗೆ ಹೇಗೆ ಗೌರವ ತೋರಿಸಬೇಕು ಎಂಬ ಬಗ್ಗೆ ಕನಿಷ್ಠ ಜ್ಞಾನ ಇಲ್ಲ ಎಂದು ಶಿವಣ್ಣ ಹರಿಹಾಯ್ದಿದ್ದಾರೆ.
Advertisement