ಬಿಜೆಪಿ ಜೊತೆ ಸಖ್ಯಕ್ಕೆ ಮುಂದಾದ ಎಚ್ ಡಿ ಕುಮಾರಸ್ವಾಮಿ

ಬಿಜೆಪಿ ಸರ್ಕಾರಕ್ಕೆ ಅಭಯ ನೀಡಿರುವ ಜೆಡಿಎಸ್ ಶಾಸಕಾಂಗ ನಾಯಕ  ಹೆಚ್.ಡಿ.ಕುಮಾರಸ್ವಾಮಿ ಇದೀಗ ಉಪ ಚುನಾವಣೆಯಲ್ಲಿ‌ ಕಮಲದ ಬೆಂಬಲಕ್ಕೆ‌ ಸಜ್ಜಾಗಿದ್ದಾರೆ.
ಎಚ್ ಡಿ ಕುಮಾರಸ್ವಾಮಿ, ಬಿಎಸ್ ವೈ
ಎಚ್ ಡಿ ಕುಮಾರಸ್ವಾಮಿ, ಬಿಎಸ್ ವೈ

ಬೆಂಗಳೂರು:  ಬಿಜೆಪಿ ಸರ್ಕಾರಕ್ಕೆ ಅಭಯ ನೀಡಿರುವ ಜೆಡಿಎಸ್ ಶಾಸಕಾಂಗ ನಾಯಕ  ಹೆಚ್.ಡಿ.ಕುಮಾರಸ್ವಾಮಿ ಇದೀಗ ಉಪ ಚುನಾವಣೆಯಲ್ಲಿ‌ ಕಮಲದ ಬೆಂಬಲಕ್ಕೆ‌ ಸಜ್ಜಾಗಿದ್ದಾರೆ.

ಡಿ.ಕೆ.ಶಿವಕುಮಾರ್  ಜೊತೆಗೆ ಹಾಗೂ ಜೆಡಿಎಸ್ ಜೊತೆಗಿನ ಸಂಬಂಧ ಸಾಕಾಗಿದೆ‌ ಎಂಬ ಆಪ್ತರ ಬಳಿ ಕಾಂಗ್ರೆಸ್ ನಾಯಕ  ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಲಾಭವಾಗಿ ಪಡೆದುಕೊಳ್ಳಲು ಯತ್ನಿಸಿರುವ  ಕುಮಾರಸ್ವಾಮಿ ಯೋಜನೆಯೊಂದನ್ನು ರೂಪಿಸಿದ್ದಾರೆ ಎನ್ನಲಾಗಿದೆ.

ಉಪಚುನಾವಣೆ ಗೆಲ್ಲುವ  ಜವಾಬ್ದಾರಿಯನ್ನು ಕಾಂಗ್ರೆಸ್  ಹೈಕಮಾಂಡ್ ಸಿದ್ದರಾಮಯ್ಯಗೆ ನೀಡಿದ್ದು, ಪಕ್ಷದ  ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. 

ಇದೇ  ಸಂದರ್ಭದಲ್ಲಿ ಶಿವಕುಮಾರ್ ಕುರಿತಾದ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಬಿರುಕು ಮೂಡಿಸಿದೆ.  ಅಲ್ಲದೇ ಶಿವಕುಮಾರ್ ಜೊತೆಗೆ ಕುಮಾರಸ್ವಾಮಿ ನಂಟು ಚೆನ್ನಾಗಿಯೇ ಇದ್ದು, ಸಿದ್ದರಾಮಯ್ಯಗೆ ಪಾಠ ಕಲಿಸಬೇಕೆಂದು ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎನ್ನಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com