ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಿತು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಅಭ್ಯರ್ಥಿಯ ಆಯ್ಕೆ ಕಸರತ್ತು ನಡೆಯಿತು. ಸಭೆಯಲ್ಲಿ ಅಭ್ಯರ್ಥಿಯ ಆಯ್ಕೆಗೆ ಸಂಪೂರ್ಣ ಒಮ್ಮತಮೂಡಿ ಬರದ ಹಿನ್ನೆಲೆ ಇನ್ನೊಂದು ಸುತ್ತಿನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಈ ಹಿನ್ನೆಲೆ ಇಂದು ಸಂಜೆಯವರೆಗೂ ಸಭೆ ನಡೆಯಲಿದ್ದು, ದೆಹಲಿಗೆ ತೆರಳುವ ತರಾತುರಿಯಲ್ಲಿ ಹಿನ್ನೆಲೆ ಕೆ.ಸಿ.ವೇಣುಗೋಪಾಲ್ ಸಭೆ ಮುಗಿಸಿ ತೆರಳಿದ್ದು ಉಳಿದ ನಾಯಕರು ಮುಂದಿನ ಹಂತದ ಸಭೆಗಳನ್ನು ನಡೆಸಲಿದ್ದಾರೆ. ನಾಳೆ ಹೊತ್ತಿಗೆ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡು ಅಂತಿಮ ಘೋಷಣೆ ಆಗಲಿದೆ.
Advertisement