ಬೆಂಗಳೂರು: ದೂರವಾಣಿ ಕದ್ದಾಲಿಕೆ ವಿಚಾರದಲ್ಲಿ ತಮಗೆ ಯಾವುದೇ ಭಯ ಇಲ್ಲ. ಎಲ್ಲ ಸರ್ಕಾರಗಳ ಆಡಳಿತಾವಧಿಯಲ್ಲಿಯೂ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ಮಾಡಿರುವ ಹಿನ್ನೆಲೆಯಲ್ಲಿ ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರ ನಿವಾಸದ ಮೇಲಾದರೂ ದಾಳಿ ಮಾಡಲಿ. ಆ ಬಗ್ಗೆ ತಮ್ಮನ್ನು ಪ್ರಶ್ನಿಸುವ ಅವಶ್ಯಕತೆಯಿಲ್ಲ. ಅಲೋಕ್ ಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದರು.
ಎಲ್ಲಾ ಸರ್ಕಾರದಲ್ಲಿಯೂ ಫೋನ್ ಟ್ಯಾಪಿಂಗ್ ನಡೆಸುವುದು ಸಹಜ. ದೇಶದ ಕಾನೂನಿನಲ್ಲಿ ತನಿಖಾ ಸಂಸ್ಥೆಗಳು ದಾಳಿ ನಡೆಸುವ ಹಾಗೂ ಪರಿಶೀಲಿಸುವ ಹಕ್ಕು ಹೊಂದಿವೆ. ತಮ್ಮನ್ನು ಬೇಕಾದರೂ ತನಿಖೆಗೆ ಒಳಪಡಿಸಲಿ. ಇದಕ್ಕೆಲ್ಲ ಗಾಬರಿ ಪಡುವುದಿಲ್ಲ. ಅಲೋಕ್ ಕುಮಾರ್ ಈಗಲೂ ದಕ್ಷ ಅಧಿಕಾರಿಯಾಗಿಯೇ ಇದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
Advertisement