ದೇವರಾಜು ಅರಸು ಪುತ್ರಿ ಸೀರೆ ಎಳೆಸಿದ್ದು ಯಾರು? ಶೇಕ್ಸ್ ಪಿಯರ್ ನಾಟಕ ಪ್ರಸಂಗ ಯಾರಿಗೆ ಅನ್ವಯಿಸುತ್ತದೆ?

ಮಾಜಿ ಸಿಎಂ ದೇವರಾಜ ಅರಸು ರಾಜಕೀಯ ಗುರು ಎಂದು ಹೇಳುತ್ತೀರಾ, ಆದರೆ ಕೆ.ಆರ್.ನಗರದಲ್ಲಿ ಅವರ ಪುತ್ರಿಯ ಸೀರೆಯನ್ನೇ ಎಳೆಸಿದ್ದು ಯಾರು?’ ಎಂದು ಶಾಸಕ ಸಾ.ರಾ.ಮಹೇಶ್‌, ವಿಶ್ವನಾಥ್ ಅವರಿಗೆ ಟಾಂಗ್ ನೀಡಿದ್ದಾರೆ.
ಸಾ.ರಾ ಮಹೇಶ್ ಮತ್ತು ವಿಶ್ವನಾಥ್
ಸಾ.ರಾ ಮಹೇಶ್ ಮತ್ತು ವಿಶ್ವನಾಥ್

ಮೈಸೂರು: ಮಾಜಿ ಸಿಎಂ ದೇವರಾಜ ಅರಸು ರಾಜಕೀಯ ಗುರು ಎಂದು ಹೇಳುತ್ತೀರಾ, ಆದರೆ ಕೆ.ಆರ್.ನಗರದಲ್ಲಿ ಅವರ ಪುತ್ರಿಯ ಸೀರೆಯನ್ನೇ ಎಳೆಸಿದ್ದು ಯಾರು?’ ಎಂದು ಶಾಸಕ ಸಾ.ರಾ.ಮಹೇಶ್‌, ವಿಶ್ವನಾಥ್ ಅವರಿಗೆ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಾ.ರಾ ಮಹೇಶ್ ,ಸಿಎಂ ಯಡಿಯೂರಪ್ಪ ಅವರ ಜೊತೆ ಎಚ್ ಡಿ ಕುಮಾರಸ್ವಾಮಿ ಸ್ನೇಹದ ಕುರಿತ ಪ್ರಸಂಗವೊಂದರ ಉದಾಹರಣೆ ನೀಡಿದ್ದರು, ಆದರೆ ಆ ಪ್ರಸಂಗ ಯಾರಿಗೆ ಅನ್ವಯವಾಗುತ್ತದೆ ಎಂದು ಪ್ರಶ್ನಿಸಿಕೊಳ್ಳಿ ಎಂದಿದ್ದಾರೆ.

ಎಸ್,ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದುಕೊಂಡು, ಅವರ ವಿರುದ್ಧವೇ ಪುಸ್ತಕ ಬರೆದವರು ಯಾರು? ಮಾಜಿ ಸಿಎಂ ಸಿದ್ದರಾಮಯ್ಯ ಸಹಕಾರದಿಂದ ಸಂಸದರಾಗಿ ಅವರ ವಿರುದ್ದವೇ ಸೋನಿಯಾ ಗಾಂಧಿಗೆ ಪತ್ರ ಬರೆದವರು ಯಾರು, ಇದನ್ನೆಲ್ಲಾ ಗಮನಿಸಿದರೇ ಶೇಕ್ಸ್ ಪಿಯರ್ ನಾಟಕ ಪ್ರಸಂಗ ಯಾರಿಗೆ ಅನ್ವಯ ಆಗಲಿದೆ ಎಂದು ಮಹೇಶ್ ಹರಿ ಹಾಯ್ದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com