ಹಳ್ಳಿಹಕ್ಕಿ ಯಾರು ಗೊತ್ತಿಲ್ಲ ಎಂದ ಸಿದ್ದರಾಮಯ್ಯ

ಹಳ್ಳಿಹಕ್ಕಿ ಯಾರು ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ವಿಶ್ವನಾಥರ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬಾಗಲಕೋಟೆ: ಹಳ್ಳಿಹಕ್ಕಿ ಯಾರು ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ವಿಶ್ವನಾಥರ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ

ಸ್ವಕ್ಷೇತ್ರ ಬಾದಾಮಿಗೆ ಆಗಮಿಸಿರುವ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮನುಷ್ಯರೆಲ್ಲ ಹಳ್ಳಿಹಕ್ಕಿ ಹೇಗೆ ಆಗುತ್ತಾರೆ. ನಾನು ಹಳ್ಳಿ ಹಕ್ಕಿ ನೋಡಿಲ್ಲ ಎಂದರು.

ಕೇಂದ್ರದಿಂದ  ಅನುದಾನ ಕಡಿಮೆ ಕುರಿತು ಮಾತನಾಡಿದ ಅವರು ಅನೇಕ ಕಡೆಗಳಲ್ಲಿ ಕೇಂದ್ರ ಸರ್ಕಾರ ಅನುದಾನ ಕಡಿಮೆ ಮಾಡಿದೆ. ಸಮಾಜ ಕಲ್ಯಾಣ ಇಲಾಖೆ, ಎನ್‌ಆರ್‌ಇಜಿ ಯೋಜನೆಗೆ ೧೦ ಕೋಟಿ ಕಡಿಮೆ ಮಾಡಿದ್ದಾರೆ ಎಂದರು.

ಕೇಂದ್ರ  ತೆರಿಗೆ ಖೋತಾ ವಿಷಯವಾಗಿ ಪ್ರತಿಕ್ರಿಯಿಸಿದ ಅವರು ರಾಜ್ಯಕ್ಕೆ ಮುಂದಿನ ವರ್ಷ ಕಡಿಮೆ ಹಣ ಆಗಲಿದೆ. ೯ ಸಾವಿರದಿಂದ ೧೧ ಸಾವಿರ ಕೋಟಿ ಕಡಿಮೆ ಆಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com