ಬಿಜೆಪಿ ಸರ್ಕಾರ ಬರಲು ಯೋಗೇಶ್ವರ್ ತ್ಯಾಗ ಇಲ್ಲ:  ಎಂಟಿಬಿ ನಾಗರಾಜ್​ಗೆ ಕೊಡಿ!

ಬಿಜೆಪಿ ಸರ್ಕಾರ ಬರಲು ಸಿಪಿ ಯೋಗೇಶ್ವರ್ ತ್ಯಾಗ ಇಲ್ಲ. ಅವರಿಗೆ ಯಾಕೆ ಮಂತ್ರಿ ಸ್ಥಾನ ನೀಡಬೇಕು. ತ್ಯಾಗ ಮಾಡಿರುವ ಎಂಟಿಬಿ ನಾಗರಾಜ್​ಗೆ ಕೊಡಬೇಕು ಎಂದು ಮಾಜಿ ಸಚಿವ ಎಚ್​. ವಿಶ್ವನಾಥ್​ ಕುಟುಕಿದ್ದಾರೆ.
ಯೋಗೇಶ್ವರ್
ಯೋಗೇಶ್ವರ್

ಮೈಸೂರು: ಬಿಜೆಪಿ ಸರ್ಕಾರ ಬರಲು ಸಿಪಿ ಯೋಗೇಶ್ವರ್ ತ್ಯಾಗ ಇಲ್ಲ. ಅವರಿಗೆ ಯಾಕೆ ಮಂತ್ರಿ ಸ್ಥಾನ ನೀಡಬೇಕು. ತ್ಯಾಗ ಮಾಡಿರುವ ಎಂಟಿಬಿ ನಾಗರಾಜ್​ಗೆ ಕೊಡಬೇಕು ಎಂದು ಮಾಜಿ ಸಚಿವ ಎಚ್​. ವಿಶ್ವನಾಥ್​ ಕುಟುಕಿದ್ದಾರೆ.

ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನ ಕೊಡುವುದರಲ್ಲಿ ಯಾವುದೇ ಅಭ್ಯಂತರ ಇಲ್ಲ. ಆದರೆ ಯೋಗೇಶ್ವರ್‌ಗೆ ಮಂತ್ರಿಗಿರಿ ಕೊಡುವುದನ್ನು ಯಾರೂ ಒಪ್ಪುತ್ತಿಲ್ಲ. ಈ ಸಂದರ್ಭದಲ್ಲಿ ಸಿ.ಪಿ.ಯೋಗೇಶ್ವರ್​ಗೆ ಸಚಿವ ಸ್ಥಾನ‌ ಕೊಡುವ ಅಗತ್ಯವಿದೆಯೇ  ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ. 

ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್ ಸಿಪಿವೈಗೆ ಸಚಿವ ಸ್ಥಾನ ಕೊಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನನಗೆ ಸಚಿವ ಸ್ಥಾನ ಮಿಸ್ ಆಗಿದೆ. ರಾಜಕಾರಣದಲ್ಲಿ  ಕೆಲವು ಸಲ ಹೀಗೆ ಮಿಸ್ ಆಗುತ್ತೆ. ಸಿಎಂ ಬಿಎಸ್​ವೈ ಜೊತೆ ನಾನು ಮಾತನಾಡಿದ್ದೇನೆ. ಜೂನ್ ನಂತರದಲ್ಲಿ ಅವಕಾಶ ಸಿಗಬಹುದು ಅಂತ ಸಿಎಂ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com