ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಚಿವ ಸಂಪುಟ ಪುನರ್ರಚನೆಯ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಕಟೀಲ್ ಪುನರ್ರಚನೆ ಯಾವಾಗ ಎಂದು ಖಚಿತವಿಲ್ಲ ಆದರೆ ನಡೆಯುವುದು ಬಹುತೇಕ ಖಚಿತ ಎಂದಿದ್ದಾರೆ.
ತಾಜಾ ಮತ್ತು ಅನುಭವಿ ಮುಖಗಳಿಗೆ ಸ್ಥಳಾವಕಾಶ ಕಲ್ಪಿಸುವುದು ಈ ಪುನರ್ರಚನೆ ಉದ್ದೇಶವಾಗಿದೆ ಎಂದು ಹೇಳಿರುವ ಕಟೀಲ್ ದಕ್ಷ ಆಡಳಿತಕ್ಕಾಗಿ ಸೂಕ್ತವಾದ ಖಾತೆಗಳನ್ನು ನೀಡಲಾಗುವುದು ಎಂದರು.
ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಮೂಲ ಮತ್ತು ವಲಸಿಗರ ಬಗೆಗೆ ಕೇಳಲಾಗಿ "ಬಿಜೆಪಿಯಲ್ಲಿ ಹೊರಗಿನವವರೆನ್ನುವವರು ಯಾರೂ ಇಲ್ಲ" ಎಂದಿದ್ದಾರೆ.. ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರು ಹೇಳಿದರು.
Advertisement