ಎಚ್ ಎಸ್ ದೊರೆಸ್ವಾಮಿ
ಎಚ್ ಎಸ್ ದೊರೆಸ್ವಾಮಿ

ಕಾಂಗ್ರೆಸ್ ಹೇಳಿಕೆಗೆ ಎಚ್ ಎಸ್ ದೊರೆಸ್ವಾಮಿ ಸೋಬಾನೆ: ಸಚಿವ ಈಶ್ವರಪ್ಪ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಸ್ವಾತಂತ್ರ್ಯ ದೊರೆಸ್ವಾಮಿ ಅವರು ಅಮೂಲ್ಯ ಜೊತೆಗಿರುವ ಫೋಟೋ ಪ್ರದರ್ಶಿಸಿದರು‌. ದೊರೆಸ್ವಾಮಿ ಅವರು ಅಮೂಲ್ಯ ಕುಟುಂಬದವರ ಜತೆ ಫೋಟೋ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ನವರು ಏನನ್ನೇ ಹೇಳಿದರೂ ದೊರೆಸ್ವಾಮಿ ಅದಕ್ಕೆ ಸೋಬಾನೆ ಹಾಡುತ್ತಾರೆ. ಸಿದ್ದರಾಮಯ್ಯ ನರೇಂದ್ರ ಮೋದಿ ಅವರನ್ನು ಕೊಲೆಗಡುಕ ಅಂದರು. ಅವತ್ತೇ ಕಾಂಗ್ರೆಸ್ ನವರು ಸಿದ್ದರಾಮಯ್ಯ ಅವರನ್ನು ಹೊರಗೆ ಹಾಕಬೇಕಾಗಿತ್ತು ಎಂದು ಕಿಡಿ ಕಾರಿದರು.

ಅಮೂಲ್ಯ ಜೊತೆ ಫೋಟೊ ತೆಗೆಸಿಕೊಂಡಿದ್ದು ಯಾಕೆ ಎಂಬುದನ್ನು ಮೊದಲು ದೊರೆಸ್ವಾಮಿ ಸ್ಪಷ್ಟಪಡಿಸಲಿ. ಅಷ್ಟೇ ಅಲ್ಲದೇ ಕನ್ನಯ್ಯ ಮತ್ತಿತರ  ಜತೆಯೂ ಯಾಕೆ ಫೋಟೊ ತೆಗೆಸಿಕೊಳ್ಳಲಾಯಿತು ಎಂದು ದೊರೆಸ್ವಾಮಿ ಸ್ಪಷ್ಟಪಡಿಸಲಿ. ನಾನು ದೊರೆಸ್ವಾಮಿ ಅವರನ್ನು ಪಾಕಿಸ್ತಾನ ಏಜೆಂಟ್ ಎಂದು ಕರೆಯುವುದಿಲ್ಲ. ಆದರೆ ನೀವು ಹಿರಿಯರಾಗಿ ನಮಗೆ ಮಾರ್ಗದರ್ಶನ ಮಾಡಿ‌ ಎಂದರು.

Related Stories

No stories found.

Advertisement

X
Kannada Prabha
www.kannadaprabha.com