ಹಾಸನ: ಹತ್ತರಿಂದ ಹದಿನೈದು ಬಿಜೆಪಿ ಶಾಸಕರು ಪಕ್ಷ ತೊರೆದು ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು ಆಪರೇಷನ್ ಕಮಲ ಸೂತ್ರಧಾರಿ ಬಿಜೆಪಿಗೆ ಆಪರೇಷನ್ ಭೀತಿ ಕಾಡುವಂತ ಹೇಳಿಕೆ ನೀಡಿದ್ದಾರೆ. '10-15 ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೊರಬರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದಿದ್ದಾರೆ. ಕೆಲವು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದ ಕುಮಾರಸ್ವಾಮಿ, 'ನಾನು ಕೊಳಕಿಗೆ ಕೈ ಹಾಕುವ ಕೆಲಸ ಮಾಡುವುದಿಲ್ಲ, ಸರ್ಕಾರವನ್ನು ಉರುಳಿಸುವ ಯತ್ನ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ ಅಸಮಾಧಾನ ಹಾಗೂ ಮಾಜಿ ಅನರ್ಹ ಶಾಸಕರಿಗೆ ಮಣೆ ಹಾಕುವ ವಿಚಾರ ಮೂಲ ಬಿಜೆಪಿ ಶಾಸಕರಲ್ಲಿ ಅತೃಪ್ತಿ ಮೂಡಿಸಿರುವ ಹೊತ್ತಿನಲ್ಲಿಯೇ ಕುಮಾರಸ್ವಾಮಿ ನೀಡಿರುವ ಈ ಹೇಳಿಕೆ ಕುತೂಹಲ ಕೆರಳಿಸಿದೆ. ಉಮೇಶ್ ಕತ್ತಿ, ರೇಣುಕಾಚಾರ್ಯ, ಅರವಿಂದ ಲಿಂಬಾವಳಿ ಸೇರಿದಂತೆ ಇನ್ನೂ ಹಲವು ಶಾಸಕರುಗಳು ಸಂಪುಟ ವಿಸ್ತರಣೆ ವೇಳೆ ಕಡೆಗಣೆನೆಗೆ ತುತ್ತಾಗಿ ಪಕ್ಷದ ವಿರುದ್ಧ ಸಿಟ್ಟಾಗಿದ್ದಾರೆ.
Advertisement