ಪಾಕಿಸ್ತಾನ​ ಪರ ಮಾತಾಡುವ ಕುಮಾರಸ್ವಾಮಿಯವರದ್ದೂ ಒಂದು ಬದುಕಾ?

ಪಾಕಿಸ್ತಾನ ಪರ ವಹಿಸಿ ಮಾತನಾಡುವ ಮಾಜಿ ಸಿಎಂ ಕುಮಾರಸ್ವಾಮಿ ಅವರದು ಒಂದು ಬದುಕಾ ಎಂದು ಸಚಿವ ಆರ್​ ಅಶೋಕ್​  ಪ್ರಶ್ನಿಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಪಾಕಿಸ್ತಾನ ಪರ ವಹಿಸಿ ಮಾತನಾಡುವ ಮಾಜಿ ಸಿಎಂ ಕುಮಾರಸ್ವಾಮಿ ಅವರದು ಒಂದು ಬದುಕಾ ಎಂದು ಸಚಿವ ಆರ್​ ಅಶೋಕ್​  ಪ್ರಶ್ನಿಸಿದ್ದಾರೆ.

ಪಾಕಿಸ್ತಾನ ಇಲ್ಲದಿದ್ದರೆ ನೀವು ಇಲ್ಲಿ ಒಂದು ಮತವನ್ನು ಕೂಡ ಪಡೆಯುತ್ತಿರಲಿಲ್ಲ. ಅದಕ್ಕಾಗಿಯೇ ಪಾಕಿಸ್ತಾನ ನಾಮ ಸ್ಮರಣೆ ನಿಮ್ಮ ಕಾಯಕವಾಗಿದೆ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಉದ್ದೇಶಿಸಿ ಟ್ವೀಟ್​ ಮಾಡಿದ್ದರು.

ಕುಮಾರಸ್ವಾಮಿ ಅವರ ಈ ಟ್ವೀಟ್​ಗೆ  ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್​ಗೆ ಹೋಗುವ ಆತಂಕದಲ್ಲಿ ಅವರು ಈ ರೀತಿ ಮಾತಾಡುತ್ತಿದ್ದಾರೆ. ಅಲ್ಪಸಂಖ್ಯಾತರನ್ನು  ಸೆಳೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಪಾಕ್​ ಅನ್ನು ಬೆಂಬಲಿಸುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಪ್ರತಿಕ್ರಿಯಿಸಿದರು.

ನಮಗೆ ಪಾಕ್​ ಧ್ವಜ ನೋಡಿದರೆ ಸಿಟ್ಟು ಬರುತ್ತದೆ. ಆದರೆ, ಇಲ್ಲಿದ್ದುಕೊಂಡು ಇವರುಗಳು ಪಾಕ್​ ಬೆಂಬಲಿಸುತ್ತಾರೆ ಎಂದು ಕೂಡ ಹರಿಹಾಯ್ದರು. ಇದೇ ವೇಳೆ ಮಂಗಳೂರು ಬಾಂಬ್​ ಪ್ರಕರಣ ಕುರಿತು ಮಾತನಾಡಿದ ಅವರು, ಆದಿತ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದಿತ್ಯನದ್ದು ಮಾನಸಿಕ ಸ್ಥಿತಿ ಸರಿಯಿಲ್ಲ. ಆ ಬಗ್ಗೆ ವೈದ್ಯರು ಕೂಡ ಹೇಳಬೇಕಿದೆ. ಮುಸ್ಲಿಂ ಇರಲಿ, ಹಿಂದೂ ಆಗಿರಲಿ. ಎಲ್ಲರಿಗೂ ಕಾನೂನು ಒಂದೇ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com