ಮೈಸೂರಿಗೊಬ್ಬ ಆ್ಯಕ್ಟಿಂಗ್ ಮಿನಿಸ್ಟರ್: ಸಾ.ರಾ.ಮಹೇಶ್ ಕುಹಕ

ಮೈಸೂರಿಗೆ ಒಬ್ಬರು ಆ್ಯಕ್ಟಿಂಗ್, ಮತ್ತೊಬ್ಬರು ಅಧಿಕೃತ ಸಚಿವರಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಕುಹಕವಾಡಿದ್ದಾರೆ.
ಸಾ ರಾ ಮಹೇಶ್
ಸಾ ರಾ ಮಹೇಶ್

ಮೈಸೂರು: ಮೈಸೂರಿಗೆ ಒಬ್ಬರು ಆ್ಯಕ್ಟಿಂಗ್, ಮತ್ತೊಬ್ಬರು ಅಧಿಕೃತ ಸಚಿವರಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಕುಹಕವಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಣಸೂರಿನ ಜನ ಅವರನ್ನು 90 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದರು. ಈಗ ಅದರ ಅರ್ಧದಷ್ಟು ಮತಗಳಿಂದ ಸೋಲಿಸಿದ್ದಾರೆ. ಆ ಮಹಾಶಯನ ಹೆಸರು ನಾನು ಹೇಳುವುದಿಲ್ಲ ಎಂದು ಪರೋಕ್ಷವಾಗಿ ಹೆಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿದರು.

ಜಿಲ್ಲಾ ಸಚಿವರ ಗಮನಕ್ಕೆ ಬಾರದಂತೆ ಮೈಸೂರಿನಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಅಬಕಾರಿ ಜಿಲ್ಲಾಧಿಕಾರಿಗಳನ್ನು ಕೇವಲ 9 ತಿಂಗಳಲ್ಲಿನಲ್ಲಿಯೇ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಪತ್ರ ವ್ಯವಹಾರ ಮಾಡಿದವರು ಯಾರು ಎಂದು ವಿಶ್ವನಾಥ್ ಹೆಸರು ಹೇಳದೇ ಪ್ರಶ್ನಿಸಿದರು.

ಅಬಕಾರಿ ಇಲಾಖೆಯಲ್ಲಿ 2 ಕೋಟಿ ಅವ್ಯವಹಾರ, ಲೋಕೋಪಯೋಗಿ ಇಲಾಖೆಯಲ್ಲಿ 50 ಲಕ್ಷ ರೂ.ಗೆ ಎಇ ಹುದ್ದೆಗೆ ನೇಮಕ, ಅಕ್ಕಿ ಗಿರಣಿಗಳಿಂದ ಲಾರಿಗಟ್ಟಲೆ ಅಕ್ಕಿ ಸಂಗ್ರಹ, ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ತಾವು ಪತ್ರ ಬರೆದಿರುವುದಾಗಿ ಸಾ.ರಾ.ಮಹೇಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com