'ಸಚಿವ ಸ್ಥಾನ ನೂರಕ್ಕೆ ನೂರರಷ್ಟು ಖಾತರಿ, ಒಂದು ಭಾಗ ಮುಗಿದಿದೆ, 2ನೇ ಭಾಗ ಶೀಘ್ರವೇ ತಿಳಿಯಲಿದೆ'

ನಾವು ಅನರ್ಹರಿಂದ ಇದೀಗ ಅರ್ಹರಾಗಿದ್ದೇವೆ, ಪರಿಷತ್ ಸದಸ್ಯರಾಗಿದ್ದೇವೆ. ಸಚಿವ ಸ್ಥಾನ ನಮಗೆ ನೂರಕ್ಕೆ ನೂರರಷ್ಟು ಸಿಗುತ್ತದೆ ಎಂದು ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್
ಆರ್.ಶಂಕರ್ ಮತ್ತು ಎಂಟಿಬಿ ನಾಗರಾಜ್

ಬೆಂಗಳೂರು: ನಾವು ಅನರ್ಹರಿಂದ ಇದೀಗ ಅರ್ಹರಾಗಿದ್ದೇವೆ, ಪರಿಷತ್ ಸದಸ್ಯರಾಗಿದ್ದೇವೆ. ಸಚಿವ ಸ್ಥಾನ ನಮಗೆ ನೂರಕ್ಕೆ ನೂರರಷ್ಟು ಸಿಗುತ್ತದೆ ಎಂದು ಆರ್.ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆಯಾಗಿ ಪ್ರಮಾಣ‌ಪತ್ರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮನ್ನು ಸಚಿವರನ್ನಾಗಿ ಮಾಡುತ್ತಾರೆ. ಅವರು ಇಚ್ಛಿಸಿದರೆ ನಾಳೆ ಬೇಕಾದರೂ ಸಚಿವನನ್ನಾಗಿ ಮಾಡಬಹುದು ಎಂದು ತಿಳಿಸಿದರು. 

ಇದೇ ವೇಳೆ ಮಾತನಾಡಿದ ಎಂಟಿಬಿ ನಾಗರಾಜ್, ಈಗ ಭಾಗ ಒಂದು ಮುಗಿದಿದೆ. ನಾವು ಇಂದು ಅರ್ಹರಾಗಿ ಪ್ರಮಾಣ‌ಪತ್ರ ಪಡೆದಿದ್ದೇವೆ. ಎರಡನೇ ಭಾಗ ಮುಂದಿನ ದಿನ ಗೊತ್ತಾಗುತ್ತದೆ‌ ಎಂದು ತಿಳಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com