ಬೆಂಗಳೂರು: ಬಿಜೆಪಿ ಅವರು ಯಾವತ್ತು ನೇರವಾಗಿ ಅಧಿಕಾರಕ್ಕೆ ಬಂದವರಲ್ಲ. ಹಿಂಬಾಗಿ ಲಿನ ಮೂಲಕ ಸರ್ಕಾರ ರಚನೆ ಮಾಡಿದವರು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ರಾಜಭವನ ಮುಂಭಾಗ ಸುದ್ದಿಗಾರರ ಜೊತೆ ಮಾತನಾಡಿ,ಸಂವಿಧಾನವನ್ನು ಹಾಳುಮಾಡುವುದಷ್ಟೆ ಅವರಿಗೆ ಗೊತ್ತಿರುವುದು.ಇವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.ವೀರ ಸಾರ್ವಕರ್ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ವಿಚಾರ ಮಾತನಾಡಿ, ಯಾರಾದರೂ ಆ ರೀತಿ ಹೇಳಿಕೆ ನೀಡಿದ್ರೆ ಕ್ರಮ ತೆಗದುಕೊಳ್ಳಲಿ. ಸರ್ಕಾರ ಅವರದ್ದೇ ಇದೆ ಎಂದು ಸಲಹೆ ನೀಡಿದ್ದಾರೆ.
ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಸ್ವಾತಂತ್ರ್ಯದ ಬಗ್ಗೆ ಬಿಜೆಪಿಯವರಿಗೆ ಎಳ್ಳಷ್ಟೂ ಗೌರವ ಇಲ್ಲ. ಇದೊಂದು ಷಡ್ಯಂತ್ರ ಎನ್ನುವ ಅನುಮಾನವಿದೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳು ವಂತೆ ಮನವಿ ಮಾಡಿದ್ದೇವೆ.
Advertisement