ನಿಖಿಲ್ ದುಬಾರಿ ಮದುವೆ: ಹಿತೈಷಿಗಳಿಗೆ ಆತಿಥ್ಯ ಕೊಡುವುದೂ ದುಂದುವೆಚ್ಚವೇ?: ವಿಶ್ವನಾಥ್'ಗೆ ಕುಮಾರಸ್ವಾಮಿ ತಿರುಗೇಟು

ರಾಜ್ಯದಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬದವರನ್ನು ಬೆಳೆಸಿದವರಿಗೆ ಹಾಗೂ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಆತಿಥ್ಯ ಕೊಡುವುದು ದುಂದುವೆಚ್ಚವೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವಿಶ್ವನಾಥ್-ಎಚ್ ಡಿ ಕುಮಾರಸ್ವಾಮಿ
ವಿಶ್ವನಾಥ್-ಎಚ್ ಡಿ ಕುಮಾರಸ್ವಾಮಿ

ಮೈಸೂರು: ರಾಜ್ಯದಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬದವರನ್ನು ಬೆಳೆಸಿದವರಿಗೆ ಹಾಗೂ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಆತಿಥ್ಯ ಕೊಡುವುದು ದುಂದುವೆಚ್ಚವೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಿಖಿಲ್ ಕುಮಾರ್ ಆಡಂಬರದ ಮದುವೆ ಕುರಿತಂತೆ ಮಾಜಿ ಸಚಿವ‌ ಎಚ್. ವಿಶ್ವನಾಥ್ ಮಾಡಿರುವ ಆರೋಪಕ್ಕೆ ಇಂದಿಲ್ಲಿ ತಿರುಗೇಟು ನೀಡಿದ ಕುಮಾರಸ್ವಾಮಿ, ತಮ್ಮ ಕುಟುಂಬದಲ್ಲಿ ತಾವು ಮದುವೆ  ಮಾಡುವುದಕ್ಕೆ ಇವರಿಗೆ ಏಕೆ ಚಿಂತೆ. ಉಪ ಚುನಾವಣೆಗೆಯಲ್ಲಿ ಖರ್ಚು ಮಾಡಿದ್ದ ಕೋಟ್ಯಾಂತರ  ರೂಪಾಯಿ ಯಾರಪ್ಪನ ಮನೆ ದುಡ್ಡು. ಅದಕ್ಕೆ ಬಂಡವಾಳ ಹಾಕಿದವರು ಯಾರು?. ಒಂದೊಂದು ಕ್ಷೇತ್ರಕ್ಕೆ 60 ಕೋಟಿ, 100 ಕೋಟಿ ಖರ್ಚು ಮಾಡುವಾಗ ಜನರ ಪರಿಸ್ಥಿತಿಯ ಬಗ್ಗೆ ಅವರಿಗೆ ಅರಿವಾಗಲಿಲ್ಲವೇ? ಎಂದು ಪ್ರಶ್ನಿಸಿ, ಇಂತಹವರಿಂದ ತಾವು ಹೇಳಿಸಿಕೊಳ್ಳಬೇಕಾಗಿಲ್ಲ ಎಂದರು.

ಪರಿಷತ್  ಮಾಜಿ ಸದಸ್ಯ ರಮೇಶ್ ಬಾಬು ಜೆಡಿಎಸ್ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ‌  ನೀಡಿರುವುದರಿಂದ ತಮ್ಮ ಪಕ್ಷಕ್ಕೆ ಯಾವುದೇ ತೊಂದರೆಯಾಗಿಲ್ಲ. ಅವರಿಗೆ ಎಲ್ಲಾ ಅಧಿಕಾರಿ ಕೊಟ್ಟರೆ ಚೆನ್ನಾಗಿರುತ್ತದೆ, ಅಧಿಕಾರ ಕೊಡದೆ‌ ಇದ್ದಾಗ ವರಿಷ್ಠರ ನಡೆ ಚೆನ್ನಾಗಿ ಇರುವುದಿಲ್ಲ. ಇಂತಹ ಭಾವನೆ ಸರ್ವೆಸಾಮಾನ್ಯ ತಾನೇ ಎಂದು ಮಾರ್ಮಿಕವಾಗಿ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com