ಮುಂಬೈನಿಂದ ಬಂದ 7000 ಜನರನ್ನೇಕೆ ಕ್ವಾರಂಟೈನ್ ಮಾಡಲಿಲ್ಲ: ಮಂಡ್ಯ ಜಿಲ್ಲಾಧಿಕಾರಿಗಳ ವಿರುದ್ಧ ಹೆಚ್'ಡಿಕೆ ಕಿಡಿ

ಮುಂಬೈನಿಂದ ಸುಮಾರು 7000 ಮಂದಿ ಮಂಡ್ಯ ಜಿಲ್ಲೆಗೆ ಹಿಂದುರುಗಿದ್ದು, ಅವರನ್ನೆಲ್ಲಾ ಜಿಲ್ಲಾಡಳಿತ ಸರಿಯಾಗಿ ಕ್ವಾರಂಟೈನ್ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಆರೋಪಿಸಿದ್ದಾರೆ. 
ಹೆಚ್.ಡಿ.ಕುಮಾರಸ್ವಾಮಿ
ಹೆಚ್.ಡಿ.ಕುಮಾರಸ್ವಾಮಿ

ದೇವನಹಳ್ಳಿ: ಮುಂಬೈನಿಂದ ಸುಮಾರು 7000 ಮಂದಿ ಮಂಡ್ಯ ಜಿಲ್ಲೆಗೆ ಹಿಂದುರುಗಿದ್ದು, ಅವರನ್ನೆಲ್ಲಾ ಜಿಲ್ಲಾಡಳಿತ ಸರಿಯಾಗಿ ಕ್ವಾರಂಟೈನ್ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಆರೋಪಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿ ಮಂಡ್ಯ ಜಿಲ್ಲೆಯ ಸುಮಾರು 15 ಸಾವಿರ ಜನರಿದ್ದಾರೆ. ಅದರಲ್ಲಿ 7 ಸಾವಿರ ಜನ ವಾಪಸ್ಸಾಗಿದ್ದಾರೆ. ಬಂದವರನ್ನು ಸರಿಯಾಗಿ ಕ್ವಾರಂಟೈನ್ ಮಾಡಿಲ್ಲ. ವೈದ್ಯಕೀಯ ಪರೀಕ್ಷೆಗೂ ಒಳಪಡಿಸಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ನಿರ್ಲಕ್ಷ್ಯತನದಿಂದ ದೊಡ್ಡ ಅನಾಹುತ ಆಗಲಿದ್ದು, ಈಗಲೇ ಸರ್ಕಾರ ಕ್ರಮಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ. 

ಮಂಡ್ಯದಲ್ಲಿ ದೊಡ್ಡ ಅನಾಹುತ ಮಾಡಲು ಸರ್ಕಾರ ಹೊರಟಿದೆ. ಮುಂಬೈನಿಂದ ಅಷ್ಟು ಜನರು ಬಂದಿದ್ದರೂ ಯಾವುದೇ ಮುಂಜಾಗ್ರತೆಯನ್ನೂ ತೆಗೆದುಕೊಂಡಿಲ್ಲ. ಮಾತ್ರವಲ್ಲದೇ ಈ ಘಟನೆಗೆ ಕಾರಣಕರ್ತರಾಗಿರುವ ಬೇಜಬ್ದಾರಿ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com