ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಮತದಾನ ಮಾಡಿದೆ: ಸಚಿವ ಆರ್.ಅಶೋಕ್

ಕಂದಾಯ ಸಚಿವ ಆರ್.ಅಶೋಕ್ ಪತ್ನಿ ಸಮೇತರಾಗಿ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಅಶೋಕ
ಅಶೋಕ

ಬೆಂಗಳೂರು: ಕಂದಾಯ ಸಚಿವ ಆರ್.ಅಶೋಕ್ ಪತ್ನಿ ಸಮೇತರಾಗಿ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. 

ಸೈಂಟ್ ಕ್ಲಾರೆಟ್ ಶಾಲೆಯ ಮತಕೇಂದ್ರ 22ರಲ್ಲಿ ಸಚಿವ ಆರ್.ಅಶೋಕ್‌ ಮತದಾನ ಮಾಡಿದರು. ಸ್ವಲ್ಪ ಸಮಯ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ನಾನೇ ಬಿಜೆಪಿ ಅಭ್ಯರ್ಥಿ ಎಂದು ಭಾವಿಸಿ ಇಂದು ಮತದಾನ‌ ಮಾಡಿದ್ದೇನೆ. ಕಳೆದ 15 ದಿನಗಳಲ್ಲಿ ಏನೇನು ಹೇಳಬೇಕು ಏನೇನು ಕೇಳಬೇಕು ಎಲ್ಲವನ್ನೂ ಮಾಡಿದ್ದೇವೆ. ಇಂದು ನಿಮ್ಮ ಸರದಿ. ದಯವಿಟ್ಟು ಮತಗಟ್ಟೆಗೆ ಬಂದು ಮತದಾನ‌ ಮಾಡಿ. ಬೆಂಗಳೂರು, ಆರ್.ಆರ್.ನಗರ ಅಭಿವೃದ್ಧಿಗಾಗಿ ಮತ ಮಾಡಿ ಎಂದು ಮನವಿ ಮಾಡಿದರು.

ಸಂಜೆ ಆರು ಗಂಟೆ ವರೆಗೆ ಎಲ್ಲರೂ ಮತದಾನ ಮಾಡಲು ಬರುತ್ತಾರೆ ಎಂಬ ವಿಶ್ವಾಸ ಇದೆ. ನಾನು ಎಲ್ಲರಲ್ಲೂ ಮತದಾನ ಮಾಡುವಂತೆ ಮನವಿ ಮಾಡಿತ್ತೇನೆ. ಕೋವಿಡ್ ಹಿನ್ನೆಲೆ ಮತದಾನ ಮಾಡಲು ಏನೂ ಸಮಸ್ಯೆ ಇಲ್ಲ. ಚುನಾವಣಾ ಆಯೋಗ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮತದಾನಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com