ಕುಸುಮಾ ಮೂಲಕ ಒಕ್ಕಲಿಗರ ಮತಕ್ಕೆ ಗಾಳ ಹಾಕಲು ಕಾಂಗ್ರೆಸ್ ತಂತ್ರ!

ರಾಜರಾಜೇಶ್ವರಿನಗರದ ಅಭ್ಯರ್ಥಿ ಎಚ್ ಕುಸುಮಾ ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರಿ. ಹನುಮಂತರಾಯಪ್ಪ ಒಕ್ಕಲಿಗರ ಪ್ರಮುಖ ಮುಖಂಡನಾಗಿ ಗುರುತಿಸಿಕೊಂಡಿದ್ದಾರೆ. ರಾಜಕೀಯಕ್ಕೆ ಹೊಸಬರಾಗಿರುವ ಕುಸುಮಾರ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ.
ಎಚ್, ಕುಸುಮಾ
ಎಚ್, ಕುಸುಮಾ

ಬೆಂಗಳೂರು: ರಾಜರಾಜೇಶ್ವರಿನಗರದ ಅಭ್ಯರ್ಥಿ ಎಚ್ ಕುಸುಮಾ ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರಿ.

ಹನುಮಂತರಾಯಪ್ಪ ಒಕ್ಕಲಿಗರ ಪ್ರಮುಖ ಮುಖಂಡನಾಗಿ ಗುರುತಿಸಿಕೊಂಡಿದ್ದಾರೆ. ರಾಜಕೀಯಕ್ಕೆ ಹೊಸಬರಾಗಿರುವ ಕುಸುಮಾರ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ. ಅಮೆರಿಕಾದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಕುಸುಮಾ ಬೆಂಗಳೂರಿನ ಖಾಸಗಿ ಎಂಜಿನೀಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾದ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. 

ಒಕ್ಕಲಿಗರ ಮತಗಳನ್ನು ಸೆಳೆಯಲು ಕುಸುಮಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧಿಸಿತು, ಆರ್ ಆರ್ ನಗರ ಕ್ಷೇತ್ರದಲ್ಲಿ ಶೇ,25 ರಷ್ಟು ಒಕ್ಕಲಿಗ ಮತದಾರರಿದ್ದಾರೆ, 25ಸಾವಿರ ಮುಸ್ಲಿಮರಿದ್ದಾರೆ.

2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 1.08 ಲಕ್ಷ ಮತಗಳಿಸಿದ್ದರಪ. ಬಿಜೆಪಿಯ ಮುನಿರಾಜು ಗೌಡ 82 ಸಾವಿರ ಮತ್ತು ಜೆಡಿಎಸ್ ನ ಜಿ ಎಚ್ ರಾಮಚಂದ್ರ 60 ಸಾವಿರ  ಮತ ಪಡೆದಿದ್ದರು.

ಸದ್ಯ ಮುನಿರತ್ನ ಬಿಜೆಪಿಯಲ್ಲಿದ್ದು, ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಫೈಟ್ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com