'ಪರಮೇಶ್ವರ್‌ ಸೋಲಿಗೆ ಪ್ರಯತ್ನಿಸಿದ್ದು ಕೂಡಾ ನೀವೆಂದಾಯಿತಲ್ಲವೇ? ದಲಿತ ಸಿಎಂ ವಾದಕ್ಕೆ ನೀವೇ‌ ಕೊಳ್ಳಿ ಇಟ್ಟಂತಾಗಿಲ್ಲವೇ?

ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿರುವ ಬಿಜೆಪಿ ಪರಮೇಶ್ವರ್ ಸೋಲಿಗೆ ಪ್ರಯತ್ನಸಿದ್ದು ನೀವೆ ಅಲ್ಲವೇ ಎಂದು ಪ್ರಶ್ನಿಸಿದೆ.
ಪರಮೇಶ್ವರ್
ಪರಮೇಶ್ವರ್

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ರಾಜ್ಯ ಘಟಕ ಹರಿಹಾಯ್ದಿದೆ. ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿರುವ ಬಿಜೆಪಿ ಪರಮೇಶ್ವರ್ ಸೋಲಿಗೆ ಪ್ರಯತ್ನಸಿದ್ದು ನೀವೆ ಅಲ್ಲವೇ ಎಂದು ಪ್ರಶ್ನಿಸಿದೆ.

ಈ  ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ,2013 ರ ಚುನಾವಣೆಯಲ್ಲಿ ಡಾ. ಜಿ. ಪರಮೇಶ್ವರ್ ಅವರನ್ನು ಸೋಲಿಸಿದ್ದೇ ನೀವು ಎಂದು ಮೂಲ‌ ಕಾಂಗ್ರೆಸಿಗರು ಆರೋಪಿಸುತ್ತಿದ್ದಾರೆ. ಇದು ನಿಜವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.

ಸಿದ್ದರಾಮಯ್ಯ ಅವರೇ, ಹೌದು ಅಥವಾ ಇಲ್ಲ ಮಾದರಿಯ ಉತ್ತರ ನಿಮ್ಮಿಂದ ಬಯಸುತ್ತಿದ್ದೇವೆ. 2013 ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಅವರನ್ನು ಸೋಲಿಸಿದ್ದೇ ನೀವು ಎಂದು ಮೂಲ‌ ಕಾಂಗ್ರೆಸಿಗರು ಆರೋಪಿಸುತ್ತಿರುವುದು ನಿಜವೇ' ಎಂದು ಕೇಳಿದೆ.

ಸಿದ್ದರಾಮಯ್ಯ ಅವರೇ, ಉತ್ತರ ಹೌದು ಅಥವಾ ಇಲ್ಲ ಎಂದಿರಲಿ. ಒಂದೊಮ್ಮೆ ಸೋಲಿಸಿದ್ದು ನಿಜವೆಂದಾದರೆ ದಲಿತ ನಾಯಕನಿಗೆ ಅನ್ಯಾಯ ಮಾಡಿದ್ದಂತಲ್ಲವೇ? ದಲಿತ ಮುಖ್ಯಮಂತ್ರಿ ವಾದಕ್ಕೆ ನೀವೇ‌ ಕೊಳ್ಳಿ ಇಟ್ಟಂತಾಗಿಲ್ಲವೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com