ಚಿಕ್ಕಮಗಳೂರು: ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ, ಪಕ್ಷ ಹೇಳಿದ ಕೆಲಸ ಮಾಡೋದಷ್ಟೇ ನನ್ನ ಗುರಿ ಎಂದು ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ ಅವರು, ನಾನು ಪಕ್ಷದ ಕಾರ್ಯಕರ್ತನಷ್ಟೇ, ಸಿಎಂ ಹುದ್ದೆಯ ಕನಸು ಕಂಡವನಲ್ಲ ಎಂದು ಹೇಳಿದ್ದಾರೆ.
ಯಾವುದೇ ಹುದ್ದೆ ಹಾಗೂ ಸ್ಥಾನಕ್ಕಿಂತಲೂ ಪಕ್ಷವೇ ದೊಡ್ಡದು ಎಂಬುದನ್ನು ಈಗಾಗಲೇ ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ದೊಡ್ಡ ಸ್ಥಾನಕ್ಕಾಗಿ ನಾನು ಎಂದಿಗೂ ಕನಸು ಕಂಡಿಲ್ಲ. ಆದರೆ, ಪಕ್ಷದ ಉನ್ನತ ನಾಯಕರು ಯಾವುದೇ ಜವಾಬ್ದಾರಿ ನೀಡಿದರೂ ನಾನು ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಪಕ್ಷದ ತತ್ವಗಳಿಗೆ ಬದ್ಧವಾಗಿರುವ ವ್ಯಕ್ತಿ ನಾನು ಎಂದು ತಿಳಿಸಿದ್ದಾರೆ.
Advertisement