'ಮೀರ್ಸಾದಿಕ್' ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ!
ವಾಹನಗಳಿಗೆ ಬೆಂಕಿ ಹುಬ್ಬಳ್ಳಿ ಗಲಭೆ, ಕಾಂಗ್ರೆಸ್ ನಾಯಕರ ಪಿತೂರಿ, ಪೊಲೀಸರ ಮೇಲೆ ಹಲ್ಲೆ, ಲೋಡುಗಟ್ಟಲೆ ಕಲ್ಲು ಸಂಗ್ರಹ, ವಾಹನಗಳಿಗೆ ಹಾನಿ ಈ ಗಲಭೆಯಲ್ಲಿ ಮೀರ್ಸಾದಿಕ್ ಹಾಗೂ ಭ್ರಷ್ಟಾಧ್ಯಕ್ಷರ ಪಾತ್ರವೇನು? ಎಂದು ಪ್ರಶ್ನಿಸಿದೆ.
Published: 19th April 2022 02:01 PM | Last Updated: 19th April 2022 02:13 PM | A+A A-

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
ಬೆಂಗಳೂರು: ಒಂದು ಕಡೆ, ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸ್ಥಾಪಿಸಲು ಮನವಿ ಮಾಡುವುದು. ಇನ್ನೊಂದು ಕಡೆ, ಲೋಡುಗಟ್ಟಲೆ ಕಲ್ಲು ಸಂಗ್ರಹಿಸಿ ಕಲ್ಲು ತೂರಾಟ ಮಾಡಿದವರನ್ನು ಅಮಾಯಕರು ಎನ್ನುವುದು, ಇದು ಕಾಂಗ್ರೆಸ್ ನಾಯಕರ ವರಸೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಆರಕ್ಷಕರ ಮೇಲೆಯೇ ದಾಳಿ ಮಾಡಿದ ಅಲ್ಪಮತೀಯರನ್ನು ಅಮಾಯಕರು ಎಂದು ಹೇಳಲು ನೀವು ಯಾರು? ಹುಬ್ಬಳ್ಳಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಭಾಗಿಯಾಗಿದ್ದ ಹಿಜಾಬ್ ಪರ ಪ್ರತಿಭಟನೆಯಲ್ಲಿ ಶಿಕ್ಷಕಿಯೋರ್ವರು ರಕ್ತಪಾತದ ಬೆದರಿಕೆ ಹಾಕಿದ್ದರು. ಕಾಂಗ್ರೆಸ್ ಆಯೋಜಿಸಿದ್ದ ಈ ಪ್ರತಿಭಟನೆಗೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ ಇದೆ. ಪ್ರತಿಭಟನೆಯಲ್ಲಿ ಹೇಳಿದ್ದನ್ನೇ ಮಾಡಿದ್ದಾರೆ. ವ್ಯವಸ್ಥಿತ ಪಿತೂರಿಯಿದು!
ಈ ಹಿಂದೆ #ಮೀರ್ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ.
— BJP Karnataka (@BJP4Karnataka) April 19, 2022
ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ?#CONgressSupportsJihadis pic.twitter.com/MxcCAzWBtN
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಲೀಮ್ ಅಹಮದ್ ಅವರಿಗೆ ಟಿಕೆಟ್ ನೀಡಿದಾಗ ಹುಬ್ಬಳ್ಳಿ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಅವರಿಗೆ ಅಸಮಾಧಾನವಾಗಿತ್ತು. ಹುಬ್ಬಳ್ಳಿ ಗಲಭೆ ಈ ಅಸಮಾಧಾನದ ಮುಂದುವರೆದ ಭಾಗವೇ!? ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ಪ್ರಾಯೋಜಕತ್ವದಲ್ಲೇ ನಡೆದಿದ್ದೇ?
ಈ ಹಿಂದೆ ಮೀರ್ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ. ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ?
ಡಿಜೆ ಹಳ್ಳಿ ಗಲಭೆ, ಕಾಂಗ್ರೆಸ್ ನಾಯಕರ ಪಿತೂರಿ, ಪೋಲಿಸ್ ಠಾಣೆಯ ಮೇಲೆ ದಾಳಿ, ವಾಹನಗಳಿಗೆ ಬೆಂಕಿ ಹುಬ್ಬಳ್ಳಿ ಗಲಭೆ, ಕಾಂಗ್ರೆಸ್ ನಾಯಕರ ಪಿತೂರಿ, ಪೊಲೀಸರ ಮೇಲೆ ಹಲ್ಲೆ, ಲೋಡುಗಟ್ಟಲೆ ಕಲ್ಲು ಸಂಗ್ರಹ, ವಾಹನಗಳಿಗೆ ಹಾನಿ ಈ ಗಲಭೆಯಲ್ಲಿ ಮೀರ್ಸಾದಿಕ್ ಹಾಗೂ ಭ್ರಷ್ಟಾಧ್ಯಕ್ಷ ರ ಪಾತ್ರವೇನು? ಎಂದು ಪ್ರಶ್ನಿಸಿದೆ.
ಡಿಜೆ ಹಳ್ಳಿ ಗಲಭೆ
— BJP Karnataka (@BJP4Karnataka) April 19, 2022
√ ಕಾಂಗ್ರೆಸ್ ನಾಯಕರ ಪಿತೂರಿ
√ ಪೋಲಿಸ್ ಠಾಣೆಯ ಮೇಲೆ ದಾಳಿ
√ ವಾಹನಗಳಿಗೆ ಬೆಂಕಿ
ಹುಬ್ಬಳ್ಳಿ ಗಲಭೆ
√ ಕಾಂಗ್ರೆಸ್ ನಾಯಕರ ಪಿತೂರಿ
√ ಪೊಲೀಸರ ಮೇಲೆ ಹಲ್ಲೆ
√ ಲೋಡುಗಟ್ಟಲೆ ಕಲ್ಲು ಸಂಗ್ರಹ
√ ವಾಹನಗಳಿಗೆ ಹಾನಿ
ಈ ಗಲಭೆಯಲ್ಲಿ #ಮೀರ್ಸಾದಿಕ್ ಹಾಗೂ ಭ್ರಷ್ಟಾಧ್ಯಕ್ಷ ರ ಪಾತ್ರವೇನು?#CONgressSupportsJihadis pic.twitter.com/4G2S4P5evk