social_icon

'ಕಮಿಷನ್ ದಂಧೆ ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಶುರುವಾಗಿದ್ದು, ಆಪರೇಷನ್ ಕಮಲದ ಕೂಸು': ಹೆಚ್ ಡಿ ಕುಮಾರಸ್ವಾಮಿ

ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಯಿತು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

Published: 26th August 2022 12:30 PM  |   Last Updated: 26th August 2022 01:49 PM   |  A+A-


H D Kumaraswamy

ಹೆಚ್ ಡಿ ಕುಮಾರಸ್ವಾಮಿ

Posted By : Sumana Upadhyaya
Source : Online Desk

ಮೈಸೂರು: 2008ರಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಆಪರೇಷನ್ ಕಮಲದ ಪ್ರಕ್ರಿಯೆಗಳು ಪ್ರಾರಂಭ ಮಾಡಿಕೊಂಡ ಮೇಲೆ ಹಣದ ಮೂಲಕ ಏನು ಬೇಕಾದರೂ ಸಾಧಿಸಬಹುದೆಂಬ ನಿರ್ಮಾಣವನ್ನು ಬಿಜೆಪಿ ನಾಯಕರು ಸೃಷ್ಟಿಸಿದರು. ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಯಿತು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ರಿಟಿಷರ ಕಾಲದಿಂದಲೂ ಕಮಿಷನ್ ದಂಧೆ ಇದೆ. ಕಾಂಗ್ರೆಸ್ ಕರ್ನಾಟಕ ರಾಜ್ಯದಲ್ಲಿ 1983ರವರೆಗೆ ಆಳಿದ್ದಾರೆ, ನಂತರ 8 ವರ್ಷ ಜನತಾದಳ ಸರ್ಕಾರವಿತ್ತು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕಮಿಷನ್ ದಂಧೆ ಇರಲಿಲ್ಲ ಎಂದು ಕೆಂಪಣ್ಣನವರು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹೋಗಿ ಸಹಾಯ ಮಾಡುತ್ತಿದ್ದರು. ಆದರೆ ದೇವೇಗೌಡರು ಪರ್ಸೆಂಟೇಜ್ ಸಿಸ್ಟಮ್ ಇಟ್ಟಿರಲಿಲ್ಲ ಎಂಬ ಮಾತುಗಳನ್ನು ಹೇಳಿದ್ದಾರೆ. ಅದನ್ನು ನಾವು ಅಳವಡಿಸಿಕೊಂಡು ಬಂದಿದ್ದೇವೆ ಎಂದಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಕಮಿಷನ್ ಪದ್ದತಿ ಇರಲಿಲ್ಲ: ನಾನು ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ದಾಖಲೆ ಪತ್ರಗಳಿಗೆ ಸಹಿ ಹಾಕಬೇಕಾದರೆ ಕಮಿಷನ್ ಕೊಟ್ಟು ಸಹಿ ಹಾಕಿಸಿಕೊಂಡು ಹೋಗಿ ಎಂದು ಹೇಳಿರಲಿಲ್ಲ. 

ಇದನ್ನೂ ಓದಿ: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಮೋದಿಗೂ ಇಲ್ಲ, ಕಮಿಷನ್ ಖಂಡಿಸಿ ಕಾಮಗಾರಿ ನಿಲ್ಲಿಸಿ: ಎಚ್ ಡಿಕೆ

ಬಿಜೆಪಿ ಸರ್ಕಾರ ಬಂದ ನಂತರ ಶಾಸಕರ ಮಟ್ಟದಲ್ಲಿ ಗುತ್ತಿಗೆದಾರರು ಹಣ ಕೊಡುವುದು, ಯಾರದೋ ಹೆಸರಿಗೆ ಗುತ್ತಿಗೆ ಪಡೆದುಕೊಂಡು ಹಣ ಮಾಡುವ ವ್ಯವಸ್ಥೆ ದಂಧೆ ಪ್ರಾರಂಭವಾಯಿತು. ಈ ರಾಜ್ಯದಲ್ಲಿರುವ ಹಲವಾರು ಬೆಟ್ಟ-ಗುಡ್ಡ ಕ್ವಾರಿಗಳನ್ನು ಶಾಸಕರುಗಳೇ ಲೈಸೆನ್ಸ್ ಪಡೆದು ಕ್ರಶರ್ ಹಾಕಿಕೊಳ್ಳುವುದು, ಅವರೇ ಕಂಟ್ರ್ಯಾಕ್ಟ್ ಪಡೆಯುವುದು, ಮರಳು ದಂಧೆ ಹೀಗೆ ನಿರಂತರವಾಗಿ ಸ್ವೇಚ್ಛಾಚಾರವಾಗಿ ಪ್ರಾರಂಭವಾಗಿದ್ದು ಈ ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದ ನಂತರ ಎಂದು ನೇರವಾಗಿ ಆರೋಪಿಸಿದರು.

ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಪರ್ಸೆಂಟೇಜ್: ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಕೆಲವು ಇಲಾಖೆಗಳಲ್ಲಿ ಪರ್ಸೆಂಟೇಜ್ ತೆಗೆದುಕೊಂಡಿದ್ದಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು, ಈ ವ್ಯವಸ್ಥೆಯನ್ನು ಸರಿಪಡಿಸುವವರು ಯಾರು? 40 ಪರ್ಸೆಂಟ್ ಗೆ ಕಮಿಷನ್ ಯಾಕೆ ಏರಿಕೆಯಾಯಿತು, ಆರು ತಿಂಗಳು ಸರ್ಕಾರದ ಟೆಂಡರ್ ಗಳಲ್ಲಿ ಭಾಗವಹಿಸದೆ ನಿರ್ಬಂಧ ಹೇರಿ, ಆಗ ಮಾತ್ರ ಕಮಿಷನ್ ದಂಧೆಗೆ ಕಡಿವಾಣ ಹಾಕಬಹುದು, ಸರ್ಕಾರದೊಳಗೆ ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ರಾಜ್ಯದ ಜನತೆಗೆ ದ್ರೋಹ ಮಾಡಿದಂತೆ. ಗುತ್ತಿಗೆದಾರರಿಗೂ ಸಮಸ್ಯೆಯಾಗುತ್ತದೆ ಎಂದು ಹೆಚ್ ಡಿ ಕುಮಾರಸ್ವಾಮಿ ಗುತ್ತಿಗೆ ಕಾಮಗಾರಿಯೊಳಗಿನ ಹಲವು ಕರಾಳ ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಿದರು.

ಇದನ್ನೂ ಓದಿ: ನನ್ನ ವಿರುದ್ಧ ಆರೋಪಕ್ಕೆ ಸಾಕ್ಷಿ, ದಾಖಲೆ ಕೊಡಬೇಕು, ಇಲ್ಲದಿದ್ದರೆ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ: ಸಚಿವ ಮುನಿರತ್ನ

ನಾನು ಮುಖ್ಯಮಂತ್ರಿಯಾಗಿದ್ದಾಗ ಲಾಟರಿ ನಿಷೇಧ ಮಾಡಬಾರದೆಂದು ಬಹಳ ಒತ್ತಡ ಹಾಕಿದರು, ಕೋಟಿಗಟ್ಟಲೆ ಆಫರ್ ನೊಂದಿಗೆ ಬಂದರು. ಆಪರೇಷನ್ ಕಮಲದ ಹಿಂದೆ ಪರ್ಸೆಂಟೇಜ್ ವ್ಯವಹಾರದ ವಾಸನೆಯಿದೆ. ರಾಜ್ಯದ ಚುನಾವಣೆ, ಅಕ್ಕಪಕ್ಕದ ರಾಜ್ಯದ ಚುನಾವಣೆ, ದೆಹಲಿಯಿಂದ ಬಂದ ನಾಯಕರನ್ನು ಓಲೈಸಲು ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಈ ರೀತಿಯ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನೇರವಾಗಿ ಆಪಾದಿಸಿದರು.


Stay up to date on all the latest ರಾಜಕೀಯ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp