'ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿ ಎಂಬ ಪೂಜಾರಿಯವರ ಮಾತು ನೆನಪಾಗುತ್ತಿದೆ; ಶತಮಾನದ ಪಕ್ಷ, ಇತಿಹಾಸದ ಪುಟ ಸೇರುವ ಸಮಯ ಬಂದಿದೆ'
ಸಿಧು ಮತ್ತು ಚನ್ನಿ ಆಂತರಿಕ ಕಲಹದ ಪ್ರತಿಫಲವಾಗಿ ಪಂಜಾಬಿನಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ನೆಲ ಕಚ್ಚಲಿದೆ.
Published: 11th March 2022 01:08 PM | Last Updated: 11th March 2022 03:25 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಸಿಧು ಮತ್ತು ಚನ್ನಿ ಆಂತರಿಕ ಕಲಹದ ಪ್ರತಿಫಲವಾಗಿ ಪಂಜಾಬಿನಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ನೆಲ ಕಚ್ಚಲಿದೆ. ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಶನಿ ಎಂಬ ಪೂಜಾರಿಯವರ ಮಾತು ನೆನಪಿಸುತ್ತಿದ್ದೇವೆ ಎಂದು ಬಿಜೆಪಿ ಹೇಳಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಕಲಹದಿಂದಾಗಿ ವಿಪಕ್ಷ ಸ್ಥಾನವನ್ನೇ ಭದ್ರಪಡಿಸಿಕೊಳ್ಳಲಿದೆ. ಯುಪಿಯಲ್ಲಿ ನಮ್ಮ ಪಕ್ಷದ ಸಂಘಟನೆ ಸ್ವಲ್ಪ ದುರ್ಬಲವಾಗಿದೆ, ಪಕ್ಷ ಸಂಘಟನೆಯ ಕೊರತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಂದರೆ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿ ಅವರು ವಿಫಲರಾಗಿದ್ದಾರೆ ಎನ್ನುವುದು ನಿಜವಾಗಿದೆ. ರಾಜ್ಯದಲ್ಲೇ ವಿಫಲರಾದವರನ್ನು ದೇಶದ ಪ್ರಧಾನಿಯಾಗಿ ಬಿಂಬಿಸುವುದು ಮೂರ್ಖತನವಲ್ಲವೇ? ಎಂದು ಪ್ರಶ್ನಿಸಿದೆ.
ಪಂಚ ರಾಜ್ಯದ ಫಲಿತಾಂಶದಿಂದ ಒಂದು ವಿಚಾರ ಸ್ಪಷ್ಟವಾಗಿದೆ.
ಕಾಂಗ್ರೆಸ್ ಪಕ್ಷವು, ಆಡಳಿತ ಪಕ್ಷ ಬಿಡಿ ವಿಪಕ್ಷ ಸ್ಥಾನಕ್ಕೂ ಅರ್ಹವಲ್ಲ ಎಂಬ ತೀರ್ಪನ್ನು ಮತದಾರರು ನೀಡಿದ್ದಾರೆ.
ಶತಮಾನದ ಇತಿಹಾಸ ಇರುವ ಪಕ್ಷ, ಇತಿಹಾಸ ಪುಟ ಸೇರುವ ಸಮಯ ಬಂದಾಗಿದೆ.#CongressMuktBharat— BJP Karnataka (@BJP4Karnataka) March 11, 2022
ಸುರಕ್ಷಿತ ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಅವರಿಗೆ ಪಂಚರಾಜ್ಯಗಳ ಫಲಿತಾಂಶ ಬಂದ ನಂತರವೂ ಯಾವುದಾದರು ಕ್ಷೇತ್ರದಲ್ಲಿ ನಿಂತು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆಯೇ? ಕಾಂಗ್ರೆಸ್ ಸಾಧನೆ ಹೇಳುವುದು ಬಿಟ್ಟು ಬಿಜೆಪಿ ಸಾಧನೆಯ ಬಗ್ಗೆ ಪರಾಮರ್ಶಿಸಲು ನಾಚಿಗೆಯೆನಿಸುವುದಿಲ್ಲವೇ, ಪಂಚ ರಾಜ್ಯದ ಫಲಿತಾಂಶದಿಂದ ಒಂದು ವಿಚಾರ ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷವು, ಆಡಳಿತ ಪಕ್ಷ ಬಿಡಿ ವಿಪಕ್ಷ ಸ್ಥಾನಕ್ಕೂ ಅರ್ಹವಲ್ಲ ಎಂಬ ತೀರ್ಪನ್ನು ಮತದಾರರು ನೀಡಿದ್ದಾರೆ. ಶತಮಾನದ ಇತಿಹಾಸ ಇರುವ ಪಕ್ಷ, ಇತಿಹಾಸ ಪುಟ ಸೇರುವ ಸಮಯ ಬಂದಾಗಿದೆ ಎಂದು ಲೇವಡಿ ಮಾಡಿದೆ.