ಬೆಂಗಳೂರು: ಜೆಡಿಎಸ್ ಪಕ್ಷ ಉಳಿಸಲು ಜನರು ಶಕ್ತಿ ಕೊಡಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಬಸವನಗುಡಿ ಮೈದಾನದಲ್ಲಿಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಇನ್ನು ಹೋರಾಟ ಮಾಡುವ ಶಕ್ತಿ ಇದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ, ಎಲ್ಲರೂ ಸೇರಿ ಪಕ್ಷ ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಜನರು ಪಕ್ಷಕ್ಕೆ ಶಕ್ತಿ ನೀಡಿ ಎಂದು ಪುನರುಚ್ಚರಿಸಿದರು.
ಮುಂಬರುವ ಕಾರ್ಯಕಾರಿಣಿ ಸಭೆಯಲ್ಲೂ ಭಾಗಿಯಾಗ್ತೀನಿ. ಯಾವುದೇ ಒಂದು ಸಮಾಜಕ್ಕೆ ನೋವಾಗಲು ಬಿಡುವುದಿಲ್ಲ, ಜೊತೆಗೆ ಹೇಳಿದ ಮೇಲೆ ನಾವು ಕಾರ್ಯಗತ ಮಾಡಲೇಬೇಕು, ಮುಸ್ಲಿಂ ರಿಗೆ ಮೀಸಲಾತಿ ಅಂತ ಎಂದೂ ಹೇಳಿರಲಿಲ್ಲ ಆದರೂ ನಮ್ಮ ಸರ್ಕಾರದಲ್ಲಿ ಮಾಡಿದೆ ಎಂದು ಹೇಳಿದರು.
ನನ್ನ ಕಣ್ಣ ಮುಂದೆ ಜೆ ಡಿಎಸ್ ಅಧಿಕಾರಕ್ಕೆ ಬರೋದು ಸತ್ಯ. ಮತ್ತೆ ಕುಮಾರಸ್ವಾಮಿ ಮತ್ತೆ ಸಿಎಂ ಆಗುತ್ತಾರೆ, ಇದು ನಡೆದೆ ನಡೆಯುತ್ತದೆ ಯಾರಿಗೂ ಸಂಶಯ ಬೇಡ. ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ, ಕೊನೆಯವರೆಗೂ ರಾಜ್ಯದ ನೆಲ ಜಲದ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ನಾನು ಸಿಎಂ ಆಗುವಾಗಲು ಹೋರಾಟ ಆಯ್ತು, ನಾನು 90ರ ದಶಕದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿದೆ. ನಾನು ಸಿಎಂ ಆಗಿದ್ದಾಗ ರಾಜ್ಯದಲ್ಲಿ 16 ಲೋಕಸಭಾ ಸ್ಥಾನ ಬಂತು. ಆಗ ಕೆಲವರು ಕುಮಾರಸ್ವಾಮಿ ಅವರನ್ನು ಹಠ ಮಾಡಿ ನೀವು ಲೋಕಸಭೆಗೆ ಹೋಗಿ ಅಂದ್ರು ಆಗ ಗೆದ್ದು ಬಂದರು ಎಂದು ವಿವರಿಸಿದರು.
Advertisement