ಹುಳಿಯಾರು: ಕೆಲ ದಿನಗಳ ಹಿಂದೆ ಭಾರತ್ ಜೋಡೋ ಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಓಡಿ ಗಮನ ಸೆಳೆದಿದ್ದ ರಾಹುಲ್ ಗಾಂಧಿ, ಈಗ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಕೈ ಹಿಡಿದು ಓಡಿದ್ದಾರೆ.
ಡಿಕೆ ಶಿವಕುಮಾರ್ ಈ ಕುರಿತ ವಿಡಿಯೋವೊಂದನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಕೆಲವು ದಿನ ನೀವು ನಡೆಯಬೇಕು, ಕೆಲವು ದಿನ ಓಡಬೇಕು. ಕನಸಿನ ಗುರಿ ಮುಟ್ಟಲು ಎರಡೂ ಮುಖ್ಯ' ಎಂದು ಪೋಸ್ಟ್ ಹಾಕಿದ್ದಾರೆ.
ತುಮಕೂರು ಜಿಲ್ಲೆಯ ಹುಳಿಯಾರು ಬಳಿಯ ಬಸವನಗುಡಿ ಕೆಂಕೆರೆಯಲ್ಲಿ ಸಾಗುತ್ತಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಹಾಗೂ ಡಿಕೆಶಿ ಸುಮಾರು 100 ಮೀಟರ್ಗಳಷ್ಟು ಉದ್ದವಿದ್ದ ಕಾಂಗ್ರೆಸ್ ಬಾವುಟ ಹಿಡಿದು ಓಡಿದ್ದಾರೆ. ರಾಹುಲ್ ಸುತ್ತಲೂ ಇದ್ದ ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರು ಸಹ ಓಡಿ ಪಾದಪಾತ್ರೆಯಲ್ಲಿ ಪಾಲ್ಗೊಂಡವರಿಗೆ ಸ್ಫೂರ್ತಿ ತುಂಬಿದರು.
ಈ ಫೋಸ್ಟ್ ಕಾಂಗ್ರೆಸ್ ಟ್ವೀಟರ್ ನಲ್ಲಿ ಭಾರೀ ಬೇಡಿಕೆ ಪಡೆದಿದೆ. ರಾಹುಲ್ ಅವರ ಯಾತ್ರೆಗೆ ಟ್ವಿಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾನಾ ರೀತಿಯಲ್ಲಿ ಟ್ವಿಟ್ ಬಳಕೆದಾರರು ಪ್ರತಿಕ್ರಿಯಿಸುತ್ತಿದ್ದಾರೆ.
Advertisement