social_icon

ಬೊಮ್ಮಾಯಿ ಚುನಾವಣಾ ಲಹರಿ: ಆಹ್ವಾನ ಬಂದ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಿ; ಕಾಮನ್ ಮ್ಯಾನ್ ಸಿಎಂ ಪಟ್ಟ ಉಳಿಸಿಕೊಳ್ಳಲು ತಯಾರಿ!

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜದ ಎಲ್ಲಾ ವರ್ಗಗಳೊಂದಿಗೆ ಸಂಪರ್ಕ ಸಾಧಿಸಲು ಬರುತ್ತಿರುವ ಅವಕಾಶಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಸಿಕೊಳ್ಳುತ್ತಿದ್ದಾರೆ.

Published: 08th February 2023 01:09 PM  |   Last Updated: 08th February 2023 03:14 PM   |  A+A-


Basavaraja bommai

ಬಸವರಾಜ ಬೊಮ್ಮಾಯಿ

Posted By : Shilpa D
Source : The New Indian Express

ಬೆಂಗಳೂರು: ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದ ಆಹ್ವಾನಗಳಲ್ಲಿ ಮುಖ್ಯಮಂತ್ರಿಗಳು ಕೇವಲ ಕೆಲವೇ ಆಹ್ವಾನಗಳನ್ನು ಮಾತ್ರ ಸ್ವೀಕರಿಸುತ್ತಾರೆ, ಆದರೆ ಬಸವರಾಜ ಬೊಮ್ಮಾಯಿ ಅವರು ಪಡೆಯುವ ಪ್ರತಿಯೊಂದು ಆಹ್ವಾನವನ್ನು ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ಎಲ್ಲಾ ಕಾರ್ಯ್ರಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜದ ಎಲ್ಲಾ ವರ್ಗಗಳೊಂದಿಗೆ ಸಂಪರ್ಕ ಸಾಧಿಸಲು ಬರುತ್ತಿರುವ ಅವಕಾಶಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಸಿಕೊಳ್ಳುತ್ತಿದ್ದಾರೆ.

ಸಿಎಂ ಕಾರ್ಯಕ್ರಮಗಳು ಮುಂಜಾನೆಯಿಂದ ಸಂಜೆವರೆಗೂ ಸಂಪೂರ್ಣವಾಗಿ ತುಂಬಿ ಹೋಗಿವೆ. ಮಂಗಳವಾರ ಶಕ್ತಿಗಣಪತಿನಗರ ವಾರ್ಡ್ ನಂ. 14 ರಲ್ಲಿ  ನಟರಾದ ಡಾ ರಾಜ್‌ಕುಮಾರ್, ಶಂಕರನಾಗ್ ಮತ್ತು ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ನಂತರ ಅವರು ಮೂರು  ಬಿಬಿಎಂಪಿ ಪಾರ್ಕ್‌ಗಳನ್ನು ಉದ್ಘಾಟಿಸಿದರು. ವಾರ್ಡ್ ನಂ. 182ರಲ್ಲಿ ಪಾರ್ಕ್ ಗಳನ್ನು ಉದ್ಘಾಟಿಸಿದರು. ಆದರೆ ಇದು ಮೇಯರ್ ಮತ್ತು ಸ್ಥಳೀಯ ಶಾಸಕರು ಮೇಯರ್ ಗಳು ಭಾಗವಹಿಸುವ  ಕಾರ್ಯಕ್ರಮಗಳಾಗಿದ್ದವು.

ಬುಧವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಇತರರೊಂದಿಗೆ ಶಿವಮೊಗ್ಗಕ್ಕೆ ತೆರಳಲಿದ್ದಾರೆ.  ಆದರೆ ಮಾರ್ಚ್‌ನಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿರುವುದರಿಂದ ಮುಂದಿನ ಕೆಲವು ವಾರಗಳಲ್ಲಿ ಅವರು ಬ್ಯುಸಿಯಾಗಲಿದ್ದಾರೆ.

ಇದನ್ನೂ ಓದಿ: ‘ನನ್ ಮಗನೆ ಕರೆಕ್ಟ್ ಆಗಿ ಹೆಸರು ಇಟ್ಟಿದಿಯಾ’ ಎನ್ನುತ್ತಿದ್ದರು ಅಂಬರೀಷ್': ರೇಸ್ ಕೋರ್ಸ್ ರಸ್ತೆಗೆ ರೆಬಲ್ ಸ್ಟಾರ್ ಹೆಸರು ಘೋಷಿಸಿದ ಸಿಎಂ

ಇದು ಬೊಮ್ಮಾಯಿ ಅವರ ಹತಾಶೆಯನ್ನು ತೋರಿಸುತ್ತಿದೆ. ದೆಹಲಿಯಿಂದ ಸೂಚನೆಗಳು ಬರುತ್ತಿವೆ, ಅದರಂತೆ ಬೊಮ್ಮಾಯಿ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ. ಆದರೆ ಮೊಯ್ಲಿ ಅವರ ಈ ಆರೋಪವನ್ನು ಸಿಎಂ ಕಚೇರಿ ನಿರಾಕರಿಸಿದೆ.

ನೆನಪಿಡಿ, ಇದು ಚುನಾವಣಾ ಸಮಯ. ಬೊಮ್ಮಾಯಿ ಮುಖ್ಯಮಂತ್ರಿಗಳಂತೆ ವರ್ತಿಸುವುದಿಲ್ಲ, ಅಭ್ಯರ್ಥಿಗಳಾಗಿ ವರ್ತಿಸುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ಕೆಲವು ವಾರಗಳಲ್ಲಿ ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ ಮತ್ತು ಮುಂಬರುವ ವಾರಗಳಲ್ಲಿ ಮತ್ತೆ ಹಲವು ಬಾರಿ ಇಲ್ಲಿಗೆ ಬರುವ ನಿರೀಕ್ಷೆಯಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿಯೂ ಕೆಲಸ ಮಾಡಿದ ಆರ್ ಪಿ ಜಗದೀಶ್ ಹೇಳಿದ್ದಾರೆ.

ಮುಖ್ಯಮಂತ್ರಿಗಳಿಗೆ  ಚುನಾವಣೆಯೊಂದೇ ಗುರಿಯಾಗಿರುತ್ತದೆ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಾಜಿ ಸಿಎಂ ದಿವಂಗತ  ವಿರೇಂದ್ರ ಪಾಟೀಲ್ ವ್ಯತಿರಿಕ್ತವಾಗಿದ್ದರು. ಅವರು ಅನಾವಶ್ಯಕವಾಗಿ ಯಾವುದೇ ಕಾರ್ಯಕ್ರಮಗಳಿಗೆ ಹೋಗುತ್ತಿರಲಿಲ್ಲ, ಪ್ರಚಾರ ಮಾಡುತ್ತಿರಲಿಲ್ಲ, ಹೀಗಿದ್ದೂ 177 ಸ್ಥಾನಗಳನ್ನು ಗೆದ್ದಿದ್ದರು ಎಂದು ಸ್ಮರಿಸಿದ್ದಾರೆ.

ಬೊಮ್ಮಾಯಿ ಸಾಮಾನ್ಯರ ಸಿಎಂ ಎಂದು ಭಾವಿಸಲಾಗಿದ್ದು, ಆ ಪಟ್ಟಕ್ಕೆ ತಕ್ಕಂತೆ ಬದುಕಬೇಕು. ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಾಗಿ ಅದನ್ನು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಟರ ಪ್ರತಿಮೆಗಳನ್ನು ಉದ್ಘಾಟಿಸುವುದು ಅವರ ಅಭಿಮಾನಿಗಳನ್ನು ಸಂತೋಷಪಡಿಸುವ ಮಾರ್ಗವಾಗಿದೆ ಎಂದು ಮತ್ತೊರ್ವ ಹಿರಿಯ ಪತ್ರಕರ್ತ ಎಸ್ ಸಿದ್ದರಾಜು ಹೇಳಿದ್ದಾರೆ.


Stay up to date on all the latest ರಾಜಕೀಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp