ಹಾಸನ ಜೆಡಿಎಸ್ ಟಿಕೆಟ್ ಕಗ್ಗಂಟು:ಇಂದು ನಡೆಯಬೇಕಿದ್ದ ಸಭೆ ರದ್ದುಗೊಳಿಸಿದ ಹೆಚ್ ಡಿಕೆ

ಹಾಸನ ಜೆಡಿಎಸ್ ಟಿಕೆಟ್ ವಿಚಾರ ಮತ್ತಷ್ಟು ಕಗ್ಗಂಟಾಗತೊಡಗಿದೆ.
ಹೆಚ್ ಡಿ ಕುಮಾರಸ್ವಾಮಿ- ರೇವಣ್ಣ
ಹೆಚ್ ಡಿ ಕುಮಾರಸ್ವಾಮಿ- ರೇವಣ್ಣ

ಬೆಂಗಳೂರು: ಹಾಸನ ಜೆಡಿಎಸ್ ಟಿಕೆಟ್ ವಿಚಾರ ಮತ್ತಷ್ಟು ಕಗ್ಗಂಟಾಗತೊಡಗಿದೆ. ಕ್ಷೇತ್ರದ ಟಿಕೆಟ್ ಕುರಿತು ನಿರ್ಧರಿಸಲು ಬೆಂಗಳೂರಿನಲ್ಲಿ ಹಾಸನ ಜಿಲ್ಲಾ ಮುಖಂಡರೊಂದಿಗೆ ಇಂದು ನಡೆಯಬೇಕಿದ್ದ ಸಭೆಯನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ರದ್ದುಗೊಳಿಸಿದ್ದಾರೆ.

ಟಿಕೆಟ್ ಹಂಚಿಕೆ ಕುರಿತ ಸಭೆಯ ವಿಷಯದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ನ ವರಿಷ್ಠ ಹೆಚ್ ಡಿ ದೇವೇಗೌಡ ಪ್ರವೇಶಿಸಿದ್ದು, ಅವರ ಸೂಚನೆಯ ಮೇರೆಗೆ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೆಚ್‌ಡಿಕೆ ಸಭೆಗೂ ಮುನ್ನ ಹಾಸನದಲ್ಲಿ ಹೆಚ್‌ಡಿ ರೇವಣ್ಣ ತುರ್ತು ಸಭೆ!
 
ಟಿಕೆಟ್ ವಿಷಯದಲ್ಲಿ ಪಟ್ಟು ಸಡಿಲಿಸದ ಹೆಚ್ ಡಿ ರೇವಣ್ಣ, ಬೆಂಗಳೂರಿನಲ್ಲಿ ಸಭೆ ನಡೆಸದಂತೆ ದೇವೇಗೌಡರ ಬಳಿ ಮನವಿ ಮಾಡಿದ್ದಾರೆ. ರೇವಣ್ಣ ಒತ್ತಡಕ್ಕೆ ಮಣಿದು ಸಭೆಯನ್ನು ರದ್ದುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
 
ಬೆಂಗಳೂರಿನ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮವಾದರೆ ಜಿಲ್ಲೆಯಲ್ಲಿ ನಮ್ಮ ಹಿಡಿತ ಕೈತಪ್ಪಲಿದ್ದು, ಆಂತರಿಕವಾಗಿ ಹಿನ್ನಡೆಯುಂಟಾಗಲಿದೆ ಆದ್ದರಿಂದ ಒಂದು ವಾರದ ಮಟ್ಟಿಗೆ ಸಭೆಯನ್ನು ಮುಂದೂಡಿ ಎಂದು ರೇವಣ್ಣ ಹೆಚ್ ಡಿ ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. 

ಬೆಂಗಳೂರಿನಲ್ಲಿ ಬೇಡ, ಹಾಸನದಲ್ಲೇ ಸಭೆ ಮಾಡೋಣ, ಖುದ್ದು ನಾನೇ ಸಭೆಗೆ ಬರುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com