social_icon

ಲಿಂಗಾಯತ ಮಠಾಧೀಶರನ್ನು ಭೇಟಿ ಮಾಡಿದ ಹಿರಿಯ ಕಾಂಗ್ರೆಸ್ ನಾಯಕರು, ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಕಠಿಣ ಪರಿಸ್ಥಿತಿ

ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಪಕ್ಷದ ಮುಖಂಡ ಶಾಮನೂರು ಶಿವಶಂಕರಪ್ಪ ಸೇರಿದಂತೆ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರ ಸಭೆ ಬಿಜೆಪಿಗೆ ಬಿಸಿ ಮುಟ್ಟಿಸಿದೆ.

Published: 06th May 2023 12:34 PM  |   Last Updated: 06th May 2023 03:38 PM   |  A+A-


Representative Image

ಸಾಂದರ್ಭಿಕ ಚಿತ್ರ

Posted By : Ramyashree GN
Source : Online Desk

ಹುಬ್ಬಳ್ಳಿ: ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಪಕ್ಷದ ಮುಖಂಡ ಶಾಮನೂರು ಶಿವಶಂಕರಪ್ಪ ಸೇರಿದಂತೆ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರ ಸಭೆ ಬಿಜೆಪಿಗೆ ಬಿಸಿ ಮುಟ್ಟಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಸಮುದಾಯದಲ್ಲಿ ಪ್ರಬಲ ಧ್ವನಿಯಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ಎರಡನೇ ಪುತ್ರ ಗಣೇಶ್‌ ಅವರ ಮಗಳು ಅಂಚನಾ ಶಾಮನೂರು ಮತ್ತು ಜಗದೀಶ್ ಶೆಟ್ಟರ್ ಅವರ ಮೊದಲನೇ ಪುತ್ರ ಪ್ರಶಾಂತ್ ಶೆಟ್ಟರ್ 2014ರಲ್ಲಿ ಮದುವೆಯಾದರು. ಈ ಮೂಲಕ ಜಗದೀಶ್ ಶೆಟ್ಟರ್ ಅವರೊಂದಿಗೆ ಶಾಮನೂರು ಶಿವಶಂಕರಪ್ಪ ಕುಟುಂಬ ನಿಕಟ ಸಂಬಂಧ ಹೊಂದಿದೆ.

ಶೆಟ್ಟರ್ ಪಾಳಯದ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬಲವಂತದಿಂದ ಕೆಳಗಿಳಿಸಿ, ಕೇಸರಿ ಪಕ್ಷದಲ್ಲಿನ ಲಿಂಗಾಯತ ನಾಯಕತ್ವವನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಲಿಂಗಾಯತ ಮಠಕ್ಕೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ನಂತರ ಬಿಜೆಪಿಯೊಳಗೆ ಯಾವುದೇ ಪ್ರಭಾವವಿಲ್ಲದ ಬಸವರಾಜ ಬೊಮ್ಮಾಯಿಯಂತಹ ದುರ್ಬಲ ನಾಯಕನನ್ನು ಮುಖ್ಯಮಂತ್ರಿಯಾಗಿ ಮಾಡಿತು. ಬೊಮ್ಮಾಯಿ ಜನತಾದಳದಿಂದ ಬಿಜೆಪಿಗೆ ನಿಷ್ಠೆಯನ್ನು ಬದಲಾಯಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ ಗೆಲ್ಲಲು ಬಿಜೆಪಿ ತುಡಿತ: ವಯಸ್ಸು 92 ಆದರೂ ಕ್ಷೇತ್ರದ ಮೇಲೆ ತಗ್ಗಿಲ್ಲ 'ಮುತ್ಸದ್ದಿ ಶಾಮನೂರು' ಹಿಡಿತ!

ಬಲ್ಲ ಮೂಲಗಳ ಪ್ರಕಾರ, ಬಿಜೆಪಿಯ ಬ್ರಾಹ್ಮಣ ನಾಯಕತ್ವವಾದ ಅದರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಪ್ರಹ್ಲಾದ್ ಜೋಶಿ ಅವರಿಂದ ರೂಪುಗೊಂಡ ಯೋಜನೆಯ ಭಾಗವಾಗಿ ಜಗದೀಶ್ ಶೆಟ್ಟರ್ ಅವರಂತಹ ಪ್ರಬಲ ನಾಯಕರನ್ನು ಬದಿಗಿರಿಸಿದ್ದಾರೆ ಮತ್ತು ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿದೆ ಎಂದು ಶಾಮನೂರು ನೇತೃತ್ವದ ವೀರಶೈವ ಮುಖಂಡರು, ಲಿಂಗಾಯತ ಸಮುದಾಯದ ಮೂರುಸಾವಿರ ಮಠದ ಮುಖ್ಯಸ್ಥ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ. 

ಆರ್‌ಎಸ್ಎಸ್ ಹಿನ್ನೆಲೆಯಿಂದ ಬಂದಿದ್ದ ಜಗದೀಶ್ ಶೆಟ್ಟರ್ ಅವರು ಬಿಜೆಪಿಯಲ್ಲಿ ಪ್ರಬಲ ಲಿಂಗಾಯತ ಸಮುದಾಯದ ವ್ಯಕ್ತಿಯಾಗಿದ್ದರು. ಶೆಟ್ಟರ್ ಅವರು ಏಳನೇ ಬಾರಿ ಸ್ಪರ್ಧಿಸಿ ಗೆದ್ದಿದ್ದರೆ, ಬಿಜೆಪಿಯೊಳಗೆ ಇನ್ನಷ್ಟು ಪ್ರಭಾವವನ್ನು ಹೊಂದಿರುತ್ತಿದ್ದರು. ಹೀಗಾಗಿಯೇ, ಬಿಜೆಪಿಯಲ್ಲಿರುವ ಲಿಂಗಾಯತ ಸಮುದಾಯವನ್ನು ನಿರ್ನಾಮ ಮಾಡಲು 'ಬ್ರಾಹ್ಮಣ ಲಾಬಿ' ನಡೆಯಿತು ಎಂದು ಶಾಮನೂರು ಮಠದ ಮುಖ್ಯಸ್ಥರಿಗೆ ತಿಳಿಸಿದ್ದಾರೆ. 

ಇದನ್ನೂ ಓದಿ: ಬಿಜೆಪಿ 'ಟ್ರಿಕಿ' ಗೇಮ್‌ಪ್ಲಾನ್: ಲಿಂಗಾಯತರು ಬೆಂಬಲಿಸಿದ್ದು ಯಡಿಯೂರಪ್ಪಗಾಗಿ ಹೊರತು ಸಿದ್ಧಾಂತಕ್ಕಲ್ಲ; ಪ್ರಜಾತಂತ್ರದಲ್ಲಿ 'ಜಾತಿ ಪ್ರಭುತ್ವ'ದ್ದೆ ಮೇಲುಗೈ!

ಮೂರುಸಾವಿರ ಮಠದಲ್ಲಿ ನಡೆದ ಸಭೆಯಲ್ಲಿ ನವಗ್ಲುಂಡ್, ರಾಯನಾಳ್ ಮತ್ತು ರುದ್ರಾಕ್ಷಿ ಮಠದ ಇತರ ಲಿಂಗಾಯತ ಮಠಾಧೀಶರು ಪಾಲ್ಗೊಂಡಿದ್ದರು. ಮೂರುಸಾವಿರ ಮಠದ ಮುಖ್ಯಸ್ಥರು ತಾವು ಯಾವುದೇ ಸಭೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಮುಖಂಡರ ಜತೆ ಸಭೆ ನಡೆಸಿರುವುದನ್ನು ಅಲ್ಲಗಳೆಯಲಿಲ್ಲ.

ಲಗಳ ಪ್ರಕಾರ, ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಮಠದ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ ಎಂದು ತಮ್ಮ ರಕ್ತದಲ್ಲಿ ಪತ್ರ ಬರೆದುಕೊಡುತ್ತೇನೆ ಎಂದು ಲಿಂಗಾಯತ ಮುಖಂಡರೊಬ್ಬರು ಲಿಂಗಾಯತ ನಾಯಕರ ವಿರುದ್ಧವೇ ಹೇಳಿಕೆ ನೀಡಿರುವುದು ಒಳ್ಳೆಯದಲ್ಲ. ಇದು ಬಿಜೆಪಿಯ ಬ್ರಾಹ್ಮಣ ಲಾಬಿಯ ಯೋಜನೆಯ ಭಾಗವಾಗಿದೆ. ಯಡಿಯೂರಪ್ಪ ಅವರ ಮಗನಿಗೆ ಶಿಕಾರಿಪುರದ ಟಿಕೆಟ್ ನೀಡುವುದಾಗಿ ಹೇಳಿ ಯಡಿಯೂರಪ್ಪ ಅವರಿಂದ ಒತ್ತಾಯಪೂರ್ವಕವಾಗಿ ಈ ಹೇಳಿಕೆಯನ್ನು ಕೊಡಿಸಲಾಗಿದೆ  ಎಂದು ಮುಖಂಡರು ಮಠದ ಮುಖ್ಯಸ್ಥರಿಗೆ ತಿಳಿಸಿದ್ದಾರೆ. 

ಇದನ್ನೂ ಓದಿ: ಬಿಎಸ್ ವೈ ಸೇರಿ ಬಿಜೆಪಿಯ ಲಿಂಗಾಯತ ನಾಯಕರ ರಾಜಕೀಯ ಜೀವನ ಮುಗಿಸಲು ಆರ್ ಎಸ್ಎಸ್ ವಿಘ್ನ ಸಂತೋಷಿ ಗಳ ಸಂಚು: ಸಿದ್ದರಾಮಯ್ಯ

ಮೇ 10 ರಂದು ಚುನಾವಣೆ ನಡೆಯಲಿದ್ದು, ಎರಡೂ ಪಾಳಯಗಳು ಶಸ್ತ್ರಾಗಾರದಲ್ಲಿ ತಮ್ಮ ಅಸ್ತ್ರಗಳನ್ನು ಹರಿತಗೊಳಿಸುತ್ತಿವೆ. ಲಿಂಗಾಯತ ಸಮುದಾಯದ ಕಾಂಗ್ರೆಸ್ ನಾಯಕರು ಲಿಂಗಾಯತ ಮಠದ ಮುಖ್ಯಸ್ಥರನ್ನು ಭೇಟಿಯಾಗುತ್ತಿರುವುದು 2023ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಬಹಳ ಮಹತ್ವದ್ದಾಗಿದೆ.


Stay up to date on all the latest ರಾಜಕೀಯ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp