ಅಖಂಡ ಕರ್ಣಾಟಕ.ಅಲ್ತೋ ನಮ್ಮ ಕೂಗಾಟದ ರಾಜಕೀಯ ನಾಟಕ!. ಹರಸುತಿಹನು ದೇವ ಗಾಂಧಿ;.ಮಂತ್ರಿಸಿಹುದು ಋಷಿಯ ನಾಂದಿ;.ತನಗೆ ತಾನೆ ಋತಸ್ಯಂದಿ. ಅವಂಧ್ಯೆ ಕವಿಯ ಕಲ್ಪನೆ!.ಒರ್ವನಾದೊಡೋರ್ವನಲ್ತು .ಶಕ್ತಿ ಸರ್ವನಲ್ಪನೆ?.ಹಿಂದದೊಂದು ಹಿರಿಯ ಕನಸು.ಇಂದು ಕೋಟಿ ಕೋಟಿ ಮನಸು.ಕೂಡಿ ಮೂಡಿ ನಿಂದ ನನಸು.ತಡೆವುದೇನೋ ನಿನ್ನ ಕಿನಿಸು.ಒಣರುವಲ್ಪ ಜಲ್ಪನೆ?.ಭುವನ ವಂದ್ಯೆ , ಕೇಳ್ , ಅವಂಧ್ಯೆ.ಕವಿಯ ವಿಂಧ್ಯ ಕಲ್ಪನೆ!.ಅಖಂಡ ಕರ್ಣಾಟಕ :.ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!.ಇಂದು ಬಂದು ನಾಳೆ ಸಂದು.ಹೋಹ ಸಚಿವ ಮಂಡಲ.ರಚಿಸುವೊಂದು ಕೃತಕವಲ್ತೊ.ಸಿರಿಗನ್ನಡ ಸರಸ್ವತಿಯ.ವಜ್ರ ಕರ್ಣಕುಂಡಲ!.ಅಖಂಡ ಕರ್ಣಾಟಕ:.ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!.ನೃಪತುಂಗನೆ ಚಕ್ರ ವರ್ತಿ!.ಪಂಪನಲ್ಲಿ ಮುಖ್ಯಮಂತ್ರಿ !.ರನ್ನ ಜನ್ನ ನಾಗವರ್ಮ. ರಾಘವಂಕ ಹರಿಹರ.ಬಸವೇಶ್ವರ ನಾರಣಪ್ಪ.ಸರ್ವಜ್ಞ ಷಡಕ್ಷರ :.ಸರಸ್ವತಿಯೆ ರಚಿಸಿದೊಂದು. ನಿತ್ಯ ಸಚಿವ ಮಂಡಲ. ತನಗೆ ರುಚಿರ ಕುಂಡಲ !.ಅಖಂಡ ಕರ್ಣಾಟಕ :.ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ !.ಬರಿಯ ಹೊಟ್ಟೆ ಬಟ್ಟೆಗಲ್ತೊ ;.ಪಕ್ಷ ಜಾತಿ ಕಲಹಕಲ್ತೊ ;.ಹಮ್ಮು ಬಿಮ್ಮು ಸೊಮ್ಮಿಗಲ್ತೊ ;.ಬಣ್ಣ ಚಿಟ್ಟೆ ಬಾಳಿಗಲ್ತೊ ;.ಜೋಳವಾಳಿ ಕೂಳಿಗಲ್ತೊ ;.ದರ್ಪ ಸರ್ಪ ಕಾರ್ಕೋಟಕ .ಸ್ವಾರ್ಥ ಫಣಾ ಕ್ರೀಡೆಗಲ್ತೊ.ರಾಜಕೀಯ ಪೇಟಕ.ಅಖಂಡ ಕರ್ಣಾಟಕ!.ಅಖಂಡ ಕರ್ಣಾಟಕ :.ಸರಸ್ವತಿಯೆ ರಚಸಿದೊಂದರಾಜಕೀಯ ತ್ರೋಟಕ !.ಮೆರೆಯಲಾತ್ಮ ಸಂಸ್ಕೃತಿ ;.ಬೆಳಗೆ ಜೀವ ದೀಧಿತಿ ;.ಪರಮಾತ್ಮನ ಚರಣ ದೀಪ್ತಿ.ಶರಣ ಹೃದಯಗಳಲಿ ಹೊತ್ತಿ.ಉಸಿರುಸಿರಿನ ಹಣತೆ ಬತ್ತಿ.ಉರಿಯಲೆಂದು ತಣ್ಣಗೆ ;.ಬಾಳ ಸೊಡರ್ ಗುಡಿಯ ನೆತ್ತಿ.ತನ್ನ ಮುಡಿಯ ಬಾನಿಗೆತ್ತಿ.ಸೊಗಸಲೆಂದು ರಸಸ್ಪೂರ್ತಿ. ಭಗವಂತನ ಕಣ್ಣಿಗೆ ;.ಹಾಡುತಿಹೆನು ಕಂಡ ನಾನು.ದಿಟ್ಟಿಗೇಡೊ ? ಹುಟ್ಟು ಕುರುಡೋ ?.ಬುದ್ಧಿ ಬರಡೋ ಬೇರೆ ಹುರುಡೊ?.ಮೆಳ್ಳಗಣ್ಣ, ಕಾಣೆ ನೀನು !.ಹೇಳು ! ತಪ್ಪು ನನ್ನದೇನು ?.ಕರ್ಣಾಟಕ ಎಂಬುದೇನು.ಹೆಸರೆ ಬರಿಯ ಮಣ್ಣಿಗೆ?.ಮಂತ್ರ ಕಣಾ ! ಶಕ್ತಿ ಕಣಾ !.ತಾಯಿ ಕಣಾ ! ದೇವಿ ಕಣಾ !.ಬೆಂಕಿ ಕಣಾ ! ಸಿಡಿಲು ಕಣಾ !.ಕಾವ ಕೊಲುವ ಒಲವ ಬಲವ.ಪಡೆದ ಚಲವ ಚಂಡಿ ಕಣಾ.ಋಷಿಯ ಕಾಣ್ಬ ಕಣ್ಣಿಗೆ !.ವಿರೋಧಿಗಾಸ್ಫೋಟಕ,.ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ!.ಸರಸ್ವತಿಯೆ ರಚಿಸಿದೊಂದರಾಜಕೀಯ ತ್ರೋಟಕ !.ವಿರೋಧಿಗಾಸ್ಫೋಟಕ, .ಅಖಂಡ ಕರ್ಣಾಟಕ :.ಅಲ್ತೊ ನಾವು ನರ್ತಿಪೊಂದು ರಾಜಕೀಯ ನಾಟಕ.ಅಖಂಡ ಕರ್ಣಾಟಕ !.ಅಖಡಂ ಕರ್ಣಾಟಕ !.ಜಯ್ ಜಯ್ ಜಯ್ ಅಖಂಡ ಕರ್ಣಾಟಕ !.- ಕುವೆಂಪು .02-05-1949.-(ಇಕ್ಷುಗಂಗೋತ್ರಿ).KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಅಖಂಡ ಕರ್ಣಾಟಕ.ಅಲ್ತೋ ನಮ್ಮ ಕೂಗಾಟದ ರಾಜಕೀಯ ನಾಟಕ!. ಹರಸುತಿಹನು ದೇವ ಗಾಂಧಿ;.ಮಂತ್ರಿಸಿಹುದು ಋಷಿಯ ನಾಂದಿ;.ತನಗೆ ತಾನೆ ಋತಸ್ಯಂದಿ. ಅವಂಧ್ಯೆ ಕವಿಯ ಕಲ್ಪನೆ!.ಒರ್ವನಾದೊಡೋರ್ವನಲ್ತು .ಶಕ್ತಿ ಸರ್ವನಲ್ಪನೆ?.ಹಿಂದದೊಂದು ಹಿರಿಯ ಕನಸು.ಇಂದು ಕೋಟಿ ಕೋಟಿ ಮನಸು.ಕೂಡಿ ಮೂಡಿ ನಿಂದ ನನಸು.ತಡೆವುದೇನೋ ನಿನ್ನ ಕಿನಿಸು.ಒಣರುವಲ್ಪ ಜಲ್ಪನೆ?.ಭುವನ ವಂದ್ಯೆ , ಕೇಳ್ , ಅವಂಧ್ಯೆ.ಕವಿಯ ವಿಂಧ್ಯ ಕಲ್ಪನೆ!.ಅಖಂಡ ಕರ್ಣಾಟಕ :.ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!.ಇಂದು ಬಂದು ನಾಳೆ ಸಂದು.ಹೋಹ ಸಚಿವ ಮಂಡಲ.ರಚಿಸುವೊಂದು ಕೃತಕವಲ್ತೊ.ಸಿರಿಗನ್ನಡ ಸರಸ್ವತಿಯ.ವಜ್ರ ಕರ್ಣಕುಂಡಲ!.ಅಖಂಡ ಕರ್ಣಾಟಕ:.ಅಲ್ತೋ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ!.ನೃಪತುಂಗನೆ ಚಕ್ರ ವರ್ತಿ!.ಪಂಪನಲ್ಲಿ ಮುಖ್ಯಮಂತ್ರಿ !.ರನ್ನ ಜನ್ನ ನಾಗವರ್ಮ. ರಾಘವಂಕ ಹರಿಹರ.ಬಸವೇಶ್ವರ ನಾರಣಪ್ಪ.ಸರ್ವಜ್ಞ ಷಡಕ್ಷರ :.ಸರಸ್ವತಿಯೆ ರಚಿಸಿದೊಂದು. ನಿತ್ಯ ಸಚಿವ ಮಂಡಲ. ತನಗೆ ರುಚಿರ ಕುಂಡಲ !.ಅಖಂಡ ಕರ್ಣಾಟಕ :.ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ !.ಬರಿಯ ಹೊಟ್ಟೆ ಬಟ್ಟೆಗಲ್ತೊ ;.ಪಕ್ಷ ಜಾತಿ ಕಲಹಕಲ್ತೊ ;.ಹಮ್ಮು ಬಿಮ್ಮು ಸೊಮ್ಮಿಗಲ್ತೊ ;.ಬಣ್ಣ ಚಿಟ್ಟೆ ಬಾಳಿಗಲ್ತೊ ;.ಜೋಳವಾಳಿ ಕೂಳಿಗಲ್ತೊ ;.ದರ್ಪ ಸರ್ಪ ಕಾರ್ಕೋಟಕ .ಸ್ವಾರ್ಥ ಫಣಾ ಕ್ರೀಡೆಗಲ್ತೊ.ರಾಜಕೀಯ ಪೇಟಕ.ಅಖಂಡ ಕರ್ಣಾಟಕ!.ಅಖಂಡ ಕರ್ಣಾಟಕ :.ಸರಸ್ವತಿಯೆ ರಚಸಿದೊಂದರಾಜಕೀಯ ತ್ರೋಟಕ !.ಮೆರೆಯಲಾತ್ಮ ಸಂಸ್ಕೃತಿ ;.ಬೆಳಗೆ ಜೀವ ದೀಧಿತಿ ;.ಪರಮಾತ್ಮನ ಚರಣ ದೀಪ್ತಿ.ಶರಣ ಹೃದಯಗಳಲಿ ಹೊತ್ತಿ.ಉಸಿರುಸಿರಿನ ಹಣತೆ ಬತ್ತಿ.ಉರಿಯಲೆಂದು ತಣ್ಣಗೆ ;.ಬಾಳ ಸೊಡರ್ ಗುಡಿಯ ನೆತ್ತಿ.ತನ್ನ ಮುಡಿಯ ಬಾನಿಗೆತ್ತಿ.ಸೊಗಸಲೆಂದು ರಸಸ್ಪೂರ್ತಿ. ಭಗವಂತನ ಕಣ್ಣಿಗೆ ;.ಹಾಡುತಿಹೆನು ಕಂಡ ನಾನು.ದಿಟ್ಟಿಗೇಡೊ ? ಹುಟ್ಟು ಕುರುಡೋ ?.ಬುದ್ಧಿ ಬರಡೋ ಬೇರೆ ಹುರುಡೊ?.ಮೆಳ್ಳಗಣ್ಣ, ಕಾಣೆ ನೀನು !.ಹೇಳು ! ತಪ್ಪು ನನ್ನದೇನು ?.ಕರ್ಣಾಟಕ ಎಂಬುದೇನು.ಹೆಸರೆ ಬರಿಯ ಮಣ್ಣಿಗೆ?.ಮಂತ್ರ ಕಣಾ ! ಶಕ್ತಿ ಕಣಾ !.ತಾಯಿ ಕಣಾ ! ದೇವಿ ಕಣಾ !.ಬೆಂಕಿ ಕಣಾ ! ಸಿಡಿಲು ಕಣಾ !.ಕಾವ ಕೊಲುವ ಒಲವ ಬಲವ.ಪಡೆದ ಚಲವ ಚಂಡಿ ಕಣಾ.ಋಷಿಯ ಕಾಣ್ಬ ಕಣ್ಣಿಗೆ !.ವಿರೋಧಿಗಾಸ್ಫೋಟಕ,.ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ!.ಸರಸ್ವತಿಯೆ ರಚಿಸಿದೊಂದರಾಜಕೀಯ ತ್ರೋಟಕ !.ವಿರೋಧಿಗಾಸ್ಫೋಟಕ, .ಅಖಂಡ ಕರ್ಣಾಟಕ :.ಅಲ್ತೊ ನಾವು ನರ್ತಿಪೊಂದು ರಾಜಕೀಯ ನಾಟಕ.ಅಖಂಡ ಕರ್ಣಾಟಕ !.ಅಖಡಂ ಕರ್ಣಾಟಕ !.ಜಯ್ ಜಯ್ ಜಯ್ ಅಖಂಡ ಕರ್ಣಾಟಕ !.- ಕುವೆಂಪು .02-05-1949.-(ಇಕ್ಷುಗಂಗೋತ್ರಿ).KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ