social_icon

ಕವನ ಸುಂದರಿ: ವಿಶಾಲಾ ಆರಾಧ್ಯ: ಕವನದ ಶೀರ್ಷಿಕೆ: ಕವಿತೆ ಎಂದರೆ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

Published: 03rd April 2022 03:57 PM  |   Last Updated: 03rd April 2022 03:57 PM   |  A+A-


ಕಲೆ

Posted By : Harshavardhan M
Source : Online Desk

ಕವಿತೆ ಎಂದರೆ

ವಾಹ್ ಕವಿತೆಗಳಿಗೀಗೀಗ ಭರವೇನಿಲ್ಲ
ಕವಿತೆಯೆಂದರೆ ಅಂಗೈಲಿ ಅರಮನೆ
ತೋರುವ ಜಾದೂ ಪದಗಳ ಸಮೂಹ
ಅದು ಹೆಣ್ಣಿನ ಬಡತನದ ಮುಪ್ಪಿನ 
ಬಗೆಗೇ ಬರೆದು ವಾರೆವಾಹ್ ಅನ್ನಿಸುವುದಲ್ಲಾ

ಕವಿತೆ ಎಂದರೆ
ಹೆಣ್ಣಿನ ಕಾಡಿಗಿ ಕಣ್ಣ ಕೊಳದೊಳಗಿಳಿದು
ಕಣ್ಣ ಕಾಂತೀಯ ಅನುರಣದೇ 
ಸೌಂದರ್ಯದೊಂದು ಪ್ರಬಂಧ 
ಮಾತಿಲ್ಲದೆ ಬರೆಯುವುದೇ ಹೊರತು
ಅವಳ ಗುಟ್ಟಾಗಿ ಮುಚ್ಚಿಟ್ಟ 
ಮೊಲೆಗಳ ವರ್ಣಿಸಿ ಬಿಚ್ಚಿಡುತ್ತಾ 
ಬಟಾಬಯಲಾಗಿಸುವುದಲ್ಲಾ.

ಕವಿತೆ ಎಂದರೆ 
ವಾಚ್ಯದಲೇ ತುಟಿ ಕಟಿ ಆಸನ 
ಜಘನಗಳ ತೆರೆದಿಡುವುದಲ್ಲಾ
ಮೌನದೆ ಸೂಚ್ಯದಲಿ ಆಸ್ವಾಧಿಸುವುದು 
ಮಾಸದ ಮುಟ್ಟಿನ ದಿನಗಳ 
ಮುಟ್ಟಿಮುಟ್ಟಿ ಬರೆದು ತೆರೆದಿಟ್ಟು 
ಘಾತಿಸುವುದಲ್ಲಾ
ಮುಡಿಯ ಮುಂಗುರುಳಿಂದ 
ಅಡಿಯ ಉಂಗುರದವರೆಗೆ  
ಚುಂಬಿಸಿ ಆಲಿಂಗಿಸಿ 
ಜೊತೆಯಾಗುವುದು

ಕವಿತೆ ಎಂದರೆ 
ಮದಿರೆ ಸಾಕಿ ಸುರೆ ಸುರಾಂಗನೆ
ಅಮಲಿನ ಘಮಲೇ ಅಲ್ಲಾ 
ಹಸಿವಿಗೆ ಅಂಬಲಿ ಕಸುವಿಗೆ ರೊಟ್ಟಿ
ಬೆವರಿನ ಫಲವಾಗಿ
ನೆರಳಿಗೊಂಡು ಗೂಡಾಗುವುದು

ಕವಿತೆ ಎಂದರೆ
ಮಂದಿರ ಮಸೀದಿ ಚರ್ಚುಗಳ
ಮಂತ್ರ ಆಜ಼ಾನ್ ಪ್ರಾರ್ಥನೆ 
ತೆಗಳುವ  ಜೀವಾಳವಲ್ಲಾ 
ಪ್ರತಿಜೀವಿಗೂ ಒದಗುವ ಅನ್ನದ 
ಅಗುಳಾಗುವುದು ಜೀವಸೆಲೆಗೆ 
ಮಹಾನದಿಯಾಗುವುದು

ಕವಿತೆ ಎಂದರೆ 
ಕರ್ತೃವಿಗೆ ಕರ್ಮವಾಗಿ 
ಮಾನವೀಯ ಧರ್ಮವಾಗುವುದು
ಹೆಣ್ಣಿಗೆ ತನ್ನರಿವ ಕಣ್ಣಾಗುವುದು
ಬಡತನಕೆ ಕಿರಿಯ ಸಿರಿಯಾಗುವುದು
ಮುಪ್ಪಿಗೆ ಅಂದ ಒಪ್ಪಂದವಾಗುವುದು


ಕವಯತ್ರಿ ವಿಶಾಲಾ ಆರಾಧ್ಯ ಅವರು ಬೆಂಗಳೂರು ಜಿಲ್ಲೆ ಆನೇಕಲ್ ತಾಲ್ಲೂಕಿನ ರಾಜಾಪುರದವರು. ಎಂ.ಎ. ಕನ್ನಡ ಸ್ನಾತಕೋತ್ತರ ಪದವೀಧರರಾಗಿದ್ದು, ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದಾರೆ. ತಮ್ಮ ವೃತ್ತಿ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ನಿಧಿ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಆದರ್ಶ ಅಧ್ಯಾಪಕಿ ಪ್ರಶಸ್ತಿ, ಆದರ್ಶ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಅವರಿಗೆ ಸಂದಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸಿದ್ದಾರೆ. ಕವನ ಕತೆಗಳನ್ನು ಬರೆದಿರುವ ಅವರು ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ. ಮಕ್ಕಳಿಗಾಗಿ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಗೊಂಬೆಗೊಂದು ಚೀಲ' ಎಂಬ ಮಕ್ಕಳ ಕತಾ ಸಂಕಲನವನ್ನೂ ಪ್ರಕಟಿಸಿದ್ದಾರೆ.


Stay up to date on all the latest ಪದ್ಯ ಪರಿಷೆ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp