ಕವನ ಸುಂದರಿ: ಕವಿತಾ ಗೋಪಿಕುಂಟೆ, ಸಿರಾ: ಕವನದ ಶೀರ್ಷಿಕೆ: ಬೇಸಗೆ ಸಂಭ್ರಮ
ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ
Published: 11th April 2022 03:13 PM | Last Updated: 11th April 2022 03:13 PM | A+A A-

ಕಲೆ
ಬೇಸಗೆ ಸಂಭ್ರಮ
ಸುಡುಬಿಸಿಲಿಗೆ
ಒಣಗಿದೊಲ
ಚಿಗುರೆಲೆಯ
ಜೊತೆ ಮಾತಾಡುತ್ತಿತ್ತು
ಬೆಲೆ ಏರಿಕೆಯ
ಸಂಭ್ರಮಕೆ
ಅವ್ವನ ಕಿವಿಯೋಲೆ
ಗಿರಿವಿ ಅಂಗಡಿಯ ಜೊತೆಯಾಗಿತ್ತು
ಅರೆ ಹೊಟ್ಟೆಗೆ
ತಿಂದ ಕರು
ಅಪ್ಪ ಕಟ್ಟುತ್ತಿದ್ದ
ತೋರಣವ ನೋಡುತ್ತಿತ್ತು
ಕರುಕಂಡ ಹಸು
ಹಾಕಿದ ಗುಟುರು
ಉಯ್ಯಾಲೆಯಲ್ಲಿದ್ದ
ನನ್ನ ಸೆಳೆದಿತ್ತು
ಹಜಾರದಿ ಕೂತಿದ್ದ
ಅಜ್ಜನ ಬಿಸಿಯುಸಿರು
ಹಣೆಮೇಲಿನ ಶೆಖೆನೀರ
ಹಿಂಗಿಸಿಯೆಬಿಟ್ಟಿತ್ತು

ಕವಯಿತ್ರಿ ಕವಿತಾ ಗೋಪಿಕುಂಟೆ ಅವರು ತುಮಕೂರಿನ ಸಿರಾದವರು. ಎಂಜಿನಿಯರಿಂಗ್ ಪದವೀಧರೆಯಾಗಿರುವ ಅವರು ಐಟಿ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬರಹಗಾರರಾಗಿ ಗುರುತಿಸಿಕೊಂಡಿರುವ ಅವರ ಕವಿತೆಗಳು, ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 'ಮೂಕ ರಾಗ' ಎನ್ನುವ ಕವನಸಂಕಲನವನ್ನು ಕವಿತ ಹೊರತಂದಿದ್ದಾರೆ.