ಸದ್ದಾಂ ಹುಸೇನ್ ಯಾರೊಬ್ಬರ ಸಹಾಯಕ್ಕಾಗಿ ಕಾಯುವುದಿಲ್ಲ, ತಾವು ದೇವಾಲಯ ಹೊಕ್ಕು ಅಲ್ಲಿರುವ ಏಣಿಯೊಂದನ್ನೇರಿ ಛಾವಣಿಯಲ್ಲಿರಬಹುದಾದ ಧೂಳು, ಜೇಡರ ಬಲೆಗಳಂತಹಾ ಕಸವನ್ನು ಶುಚಿಗೊಳಿಸುತ್ತಾರೆ. ಕಸ ಹೊಡೆಯುವುದು, ಬಟ್ಟೆಯಿಂದ ನೆಲ, ಗೋಡೆಗಳ ಒರೆಸುವುದನ್ನು ಅವರೊಬ್ಬರೇ ಮಾಡಬಲ್ಲರು. ಕಂಬದ ಮೇಲಿರುವ ರಾಮ, ಲಕ್ಷ್ಮಣ, ಸೀತಾ ಹಾಗೂ ಹನುಮನ ಮೂರ್ತಿಗಳ ಮೇಲಿನ ಧೂಳನ್ನು ಸಹ ಅವರು ನಿರ್ವಿಕಾರ ಭಾವದಿಂದ ಒರೆಸುತ್ತಾರೆ, ಹಾಗೆಯೇ ಆ ಮೂರ್ತಿಗಳು ಹೊಚ್ಚ ಹೊಸದಾಗಿ ಕಾಣುವವರೆಗೆ ಅವರು ಶುಚಿಗೊಳಿಸುತ್ತಾರೆ.